ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಈ ಸೋಲು ತನಗೆ ಸಿಕ್ಕಿದ ಪ್ರಖರ ಹೊಡೆತ ಎಂದಿದ್ದಾರೆ.
ಚುನಾವಣೆಯಲ್ಲಿನ ಸೋಲು ನನ್ನ ಮುಖಕ್ಕೆ ಸಿಕ್ಕಿದ ಪ್ರಖರ ಹೊಡೆತ, ಮತ್ತಷ್ಟು ಅವಮಾನಿತ, ಟ್ರೋಲ್ ಮತ್ತು ತೇಜೋವಧೆಗೊಳಗಾಗಲಿದ್ದೇನೆ ಎಂದು ತಿಳಿದಿದೆ. ನಾನು ನನ್ನ ನಿಲುವಿನಲ್ಲಿ ದೃಢವಾಗಿದ್ದೇನೆ.ಜಾತ್ಯಾತೀತ ಭಾರತಕ್ಕಾಗಿರುವ ನನ್ನ ಹೋರಾಟ ಮುಂದುವರಿಯಲಿದೆ.ಕಠಿಣ ಪಯಣ ಈಗಷ್ಟೇ ಶುರುವಾಗಲಿದೆ.ಈ ಪಯಣದಲ್ಲಿ ನನ್ನೊಂದಿಗೆ ಇದ್ದವರಿಗೆ ಧನ್ಯವಾದಗಳು ಎಂದು ಪ್ರಕಾಶ್ ರಾಜ್ಟ್ವೀಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.