ADVERTISEMENT

ರಾಷ್ಟ್ರಪತಿ ಭವನದಿಂದ ‘ಸದೃಢತೆಗಾಗಿ ಓಟ’

ಪಿಟಿಐ
Published 6 ಮಾರ್ಚ್ 2022, 10:33 IST
Last Updated 6 ಮಾರ್ಚ್ 2022, 10:33 IST
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸದೃಢತೆ ಮತ್ತು ಆರೋಗ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸಲು ಸಲುವಾಗಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ಭಾನುವಾರ ರಾಷ್ಟ್ರಪತಿ ಭವನ ಆವರಣದಲ್ಲಿ ಓಟ ಆಯೋಜಿಸಿದ್ದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸದೃಢತೆ ಮತ್ತು ಆರೋಗ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸಲು ಸಲುವಾಗಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ಭಾನುವಾರ ರಾಷ್ಟ್ರಪತಿ ಭವನ ಆವರಣದಲ್ಲಿ ಓಟ ಆಯೋಜಿಸಿದ್ದರು.   

ನವದೆಹಲಿ:ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸದೃಢತೆ ಮತ್ತು ಆರೋಗ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸಲು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ಭಾನುವಾರ ರಾಷ್ಟ್ರಪತಿ ಭವನ ಆವರಣದಲ್ಲಿ ಓಟ ಆಯೋಜಿಸಿದ್ದರು.

ರಾಷ್ಟ್ರಪತಿ ಅವರಪತ್ನಿ ಸವಿತಾ ಕೋವಿಂದ್‌ ಅವರು ಓಟಕ್ಕೆ ಚಾಲನೆ ನೀಡಿದರು. ಐದು ಕಿ.ಮೀ ಓಟವು ರಾಷ್ಟ್ರಪತಿ ಭವನ ಮುಂಭಾಗದಿಂದ ಆರಂಭವಾಗಿ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯವಾಯಿತು. ರಾಷ್ಟ್ರಪತಿ ಜೊತೆ ಅವರ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT