
ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್
– ಪಿಟಿಐ
ಚಂಡೀಗಢ: ಅಮೃತಸರದ ‘ನಾಲ್ಕು ಗೋಡೆಗಳ ನಗರ’ (ವಾಲ್ಡ್ ಸಿಟಿ), ತಲವಂಡಿ ಸಾಬೊ ಮತ್ತು ಶ್ರೀ ಆನಂದಪುರ ಸಾಹೀಬ್ ನಗರಗಳಲ್ಲಿ ಮದ್ಯ, ಮಾಂಸ ಮತ್ತು ಇತರ ಅಮಲು ಪದಾರ್ಥಗಳ ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶಿಸಿದೆ. ಈ ನಗರಗಳಿಗೆ ರಾಜ್ಯ ಸರ್ಕಾರವು ‘ಪವಿತ್ರ ನಗರ’ ಸ್ಥಾನಮಾನ ನೀಡಿದೆ.
ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್ ಅವರು, ‘ಪವಿತ್ರ ನಗರ ಸ್ಥಾನಮಾನ ನೀಡಿರುವುದು ಸಿಖ್ ಸಮುದಾಯದಲ್ಲಿ ಸಂತಸ ತಂದಿದೆ. ಈ ನಗರಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ನಮ್ಮ ಪರಂಪರೆಯ ಸಂಕೇತ’ ಎಂದು ಅವರು ಭಾನುವಾರ ವಿಡಿಯೊ ಸಂದೇಶದ ಮೂಲಕ ತಿಳಿಸಿದರು.
ಕಳೆದ ತಿಂಗಳು ನಡೆದ ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದ ಸಂದರ್ಭದಲ್ಲಿ ‘ಪವಿತ್ರ ನಗರ’ ಈ ಕುರಿತ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿತ್ತು. ಬಳಿಕ ಡಿಸೆಂಬರ್ 15ರಂದು ರಾಜ್ಯ ಸರ್ಕಾರ ಈ ಸಂಬಂಧ ಸುತ್ತೋಲೆ ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.