ADVERTISEMENT

ರಾಹುಲ್‌ರನ್ನು ತಬ್ಬಿದ ಆದಿತ್ಯ ಠಾಕ್ರೆಗೆ ಗೋಮೂತ್ರ ಸ್ನಾನ ಮಾಡಿಸಬೇಕು: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2022, 11:19 IST
Last Updated 17 ನವೆಂಬರ್ 2022, 11:19 IST
ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ರನ್ನು ತಬ್ಬಿದ್ದ ಆದಿತ್ಯ (ಪಿಟಿಐ ಚಿತ್ರ)
ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ರನ್ನು ತಬ್ಬಿದ್ದ ಆದಿತ್ಯ (ಪಿಟಿಐ ಚಿತ್ರ)   

ಮುಂಬೈ: ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ತಬ್ಬಿಕೊಂಡ ಆದಿತ್ಯ ಠಾಕ್ರೆ ಅವರನ್ನು ಗೋಮೂತ್ರದಿಂದ ‌ಶುದ್ಧೀಕರಣ ಮಾಡಬೇಕು ಎಂದು ಮಹಾರಾಷ್ಟ್ರದ ಆಡಳಿತರೂಢ ಬಿಜೆಪಿ ಹಾಗೂ ಬಾಳಾಸಾಹೇಬಾಂಚಿ ಶಿವಸೇನಾ‌ ಆಗ್ರಹಿಸಿದೆ.

‘ಸಾರ್ವಕರ್‌ ಬ್ರಿಟೀಷರೊಂದಿಗೆ ಕ್ಷಮಾಪಣೆ ಕೇಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದರು‘ ಎಂದು ರಾಹುಲ್‌ ಗಾಂಧಿ ಹೇಳಿದ ಬೆನ್ನಲ್ಲೇ ಆಡಳಿತರೂಢ ಪಕ್ಷಗಳಿಂದ ಈ ಹೇಳಿಕೆ ಹೊರಬಿದ್ದಿದೆ.

‘ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌ ಅವರನ್ನು ಟೀಕೆ ಮಾಡಿದ ರಾಹುಲ್‌ ಗಾಂಧಿಯನ್ನು, ಆದಿತ್ಯ ಠಾಕ್ರೆ ಆಲಿಂಗಿಸಿದ್ದಾರೆ. ಹೀಗಾಗಿ ಅವರಗೆ ಗೋಮೂತ್ರ ಸಿಂಪಡಸಬೇಕು. ಅಥವಾ ಪೂರ್ಣ ಪ್ರಮಾಣದ ಗೋಮೂತ್ರ ಸ್ನಾನ ಮಾಡಿಸಬೇಕು‘ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ವೀರ ಸಾವರ್ಕರ್ ಅವರನ್ನು ನಿಂದಿಸುವವರೊಂದಿಗೆ ತಾನು ಹೋಗುತ್ತಿದ್ದೇನೆ ಎಂದು ಆದಿತ್ಯ ಅವರಿಗೆ ತಿಳಿದಿರಲಿಲ್ಲವೇ? ಇದು ಬಾಳಾಸಾಹೇಬ್‌ ಠಾಕ್ರೆ ಅವರ ಹಿಂದುತ್ವದ ಸಿದ್ಧಾಂತದ ಸೋಲು. ಆದಿತ್ಯಗೆ ಬಾಳಾಸಾಹೇಬರ ಆಶೀರ್ವಾದ ಸಿಗುವುದಿಲ್ಲ‘ ಎಂದು ಬಿಜೆಪಿಯ ಕೇಂದ್ರ ಸಚಿವ ರಾವ್‌ಸಾಹೇಬ್‌ ದಾವ್ನೆ ಹೇಳಿದ್ದಾರೆ.

ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಆದಿತ್ಯ ಅವರನ್ನು ಗೋಮೂತ್ರ ಹಾಕಿ ತಿಕ್ಕಿ ಶುದ್ದೀಕರಣ ಮಾಡಬೇಕು ಎಂದು ಬಾಳಾಸಾಹೇಬಾಂಚಿ ಶಿವಸೇನೆಯ ದೀಪಕರ್‌ ಕೇಸರ್‌ಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.