ADVERTISEMENT

ರಾಜಾ ಭಯ್ಯಾ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 18:47 IST
Last Updated 28 ಫೆಬ್ರುವರಿ 2022, 18:47 IST

ಲಖನೌ (ಪಿಟಿಐ):ಉತ್ತರ ಪ್ರದೇಶದ ಮಾಜಿ ಸಚಿವ, ಪಕ್ಷೇತರ ಅಭ್ಯರ್ಥಿ ರಘುರಾಜ್‌ ಪ್ರತಾಪ್‌ ಸಿಂಗ್ ಅಲಿಯಾಸ್‌ ರಾಜಾ ಭಯ್ಯಾ ಹಾಗೂ ಇತರ 17 ಮಂದಿಯ ಮೇಲೆ ದೂರು ದಾಖಲಾಗಿದೆ. ಸಮಾಜವಾದಿ ಪಕ್ಷದ ಮತಗಟ್ಟೆ ಏಜೆಂಟ್‌ ಒಬ್ಬರನ್ನು ಥಳಿಸಿದ ಆರೋಪ ಇವರ ಮೇಲೆ ಇದೆ.

ಫೆ. 27ರಂದು ಐದನೇ ಹಂತದ ಮತದಾನದ ಸಂದರ್ಭದಲ್ಲಿ ರಾಕೇಶ್‌ ಕುಮಾರ್‌ ಪಾಸಿ ಅವರ ಮೇಲೆ ಹಲ್ಲೆ ಆಗಿತ್ತು. ಅವರನ್ನು ಎಳೆದೊಯ್ದು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT