ADVERTISEMENT

ಲಾಕ್‌ಡೌನ್‌ನಿಂದಲೂ ಲಾಭ ಗಳಿಸುತ್ತಿರುವ ಸರ್ಕಾರ: ರಾಹುಲ್‌ ಗಾಂಧಿ ಟೀಕೆ

ಪಿಟಿಐ
Published 25 ಜುಲೈ 2020, 10:08 IST
Last Updated 25 ಜುಲೈ 2020, 10:08 IST
ಲಾಕ್‌ಡೌನ್‌ ಸಂದರ್ಭದಲ್ಲಿ ರೈಲ್ವೆ ಇಲಾಖೆ ಓಡಿಸುತ್ತಿದ್ದ ಶ್ರಮಿಕ್‌ ರೈಲುಗಳನ್ನು ಏರಲು ವಲಸೆ ಕಾರ್ಮಿಕರ ನೂಕುನುಗ್ಗಲು. (ಪಿಟಿಐ ಚಿತ್ರ)
ಲಾಕ್‌ಡೌನ್‌ ಸಂದರ್ಭದಲ್ಲಿ ರೈಲ್ವೆ ಇಲಾಖೆ ಓಡಿಸುತ್ತಿದ್ದ ಶ್ರಮಿಕ್‌ ರೈಲುಗಳನ್ನು ಏರಲು ವಲಸೆ ಕಾರ್ಮಿಕರ ನೂಕುನುಗ್ಗಲು. (ಪಿಟಿಐ ಚಿತ್ರ)   

ನವದೆಹಲಿ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‌ಡೌನ್‌ನಿಂದಲೂ ಕೇಂದ್ರ ಸರ್ಕಾರ ಲಾಭ ಮಾಡುತ್ತಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕಗೊಳ್ಳುತ್ತಿರುವ ಸಮಯದಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸಲು ‘ಶ್ರಮಿಕ್ ರೈಲು‘ಗಳನ್ನು ಓಡಿಸುವ ಮೂಲಕ ಭಾರತೀಯ ರೈಲ್ವೆ ಲಾಭ ಗಳಿಸುತ್ತಿದೆ ಎಂಬ ವರದಿಯನ್ನು ಹಂಚಿಕೊಂಡಿರುವ ಅವರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

‘ರೋಗದ ಕಾರ್ಮೋಡ ಕವಿದಿರುವ ಈ ಹೊತ್ತಿನಲ್ಲಿ ಜನರು ತೊಂದರೆಯಲ್ಲಿದ್ದಾರೆ. ಆದರೆ ಇದರಲ್ಲಿಯೂ ಲಾಭ ಗಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಜನ ವಿರೋಧಿ ಸರ್ಕಾರವು ವಿಪತ್ತನ್ನು ಲಾಭದಾಯಕವಾಗಿ ಪರಿವರ್ತಿಸಿಕೊಂಡಿದೆ ಮತ್ತು ಗಳಿಕೆಯಲ್ಲಿ ತೊಡಗಿದೆ,’ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಲಾಕ್ ಡೌನ್ ಸಮಯದಲ್ಲಿ ವಲಸೆಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ‘ಶ್ರಮಿಕ್’ ಹೆಸರಿನಲ್ಲಿ ರೈಲುಗಳನ್ನು ಓಡಿಸಲಾಗಿತ್ತು. ಇದರಿಂದ ರೈಲ್ವೆ ಇಲಾಖೆ ₹428 ಕೋಟಿ ಲಾಭ ಗಳಿಸಿದೆ ಎಂದು ರಾಹುಲ್‌ ಹಂಚಿಕೊಂಡಿದ್ದ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.