ADVERTISEMENT

ನಾಲ್ವರು ರೈಲ್ವೆ ಪೊಲೀಸರ ವಿರುದ್ಧ ಮೊಕದ್ದಮೆ

ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ

ಪಿಟಿಐ
Published 13 ಜೂನ್ 2019, 16:49 IST
Last Updated 13 ಜೂನ್ 2019, 16:49 IST
   

ಮುಜಫ್ಫರ್‌ನಗರ: ಪತ್ರಕರ್ತರೊಬ್ಬರನ್ನು ಥಳಿಸಿದ್ದ ಆರೋಪಕ್ಕಾಗಿ ಠಾಣಾಧಿಕಾರಿ ಸೇರಿದಂತೆನಾಲ್ವರು ರೈಲ್ವೆ ಪೊಲೀಸರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಸಂಭವಿಸಿದ ಹಳಿ ತಪ್ಪಿದ ಗೂಡ್ಸ್‌ ರೈಲಿನ ಘಟನೆ ಕುರಿತು ವರದಿ ಮಾಡಲು ತೆರಳಿದ್ದ ಪತ್ರಕರ್ತ ಅಮಿತ್‌ ಶರ್ಮಾ ಅವರನ್ನು ಈ ಪೊಲೀಸರು ಥಳಿಸಿ, ಬಂಧಿಸಿದ್ದರು.

ADVERTISEMENT

ಠಾಣಾಧಿಕಾರಿ ರಾಕೇಶ್‌ ಕುಮಾರ್‌ ಸೇರಿದಂತೆ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್‌ 323 (ನೋವುಂಟು ಮಾಡುವುದು), 504 (ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್‌ ಬೆದರಿಕೆ), 364 (ಅಪಹರಣ), 392 (ಕಳ್ಳತನಕ್ಕಾಗಿ ಶಿಕ್ಷೆ) ಮತ್ತು 342 (ತಪ್ಪಾಗಿ ಬಂಧಿಸಿಟ್ಟಿರುವುದು) ಅಡಿಯಲ್ಲಿಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಕುಮಾರ್ ಮತ್ತು ಕಾನ್‌ಸ್ಟೆಬಲ್‌ ಸಂಜಯ್‌ ಪವಾರ್‌ ಅವರನ್ನು ಬುಧವಾರ ಅಮಾನತು ಮಾಡಲಾಗಿತ್ತು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸುಭಾಷ್‌ ಚಾಂದ್‌ ದುಬೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.