ADVERTISEMENT

ದೇಶದಲ್ಲಿ ಶಾಂತಿ ಕಾಪಾಡಲು ಯಾವುದೇ ಪಾತ್ರ ನಿರ್ವಹಿಸಲು ಸಿದ್ಧ: ರಜನಿಕಾಂತ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 3:06 IST
Last Updated 2 ಮಾರ್ಚ್ 2020, 3:06 IST
ಮುಸ್ಲಿಂ ನಾಯಕರನ್ನು ಭೇಟಿಯಾದ ರಜನಿಕಾಂತ್‌
ಮುಸ್ಲಿಂ ನಾಯಕರನ್ನು ಭೇಟಿಯಾದ ರಜನಿಕಾಂತ್‌   

ಚೆನ್ನೈ: ದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಪಾತ್ರ ನಿರ್ವಹಿಸಲು ಸಿದ್ಧವಿರುವುದಾಗಿ ಖ್ಯಾತ ನಟ ರಜನಿಕಾಂತ್‌ ಹೇಳಿದ್ದಾರೆ.

ಚೆನ್ನೈನನಿವಾಸದಲ್ಲಿ ಭಾನುವಾರ ಮುಸ್ಲಿಂ ಸಂಘಟನೆಯ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ರಜನಿಕಾಂತ್ ಟ್ವೀಟ್‌ ಮಾಡಿದ್ದಾರೆ.

‘ದೇಶದಲ್ಲಿ ಶಾಂತಿ ಕಾಪಾಡಲು ಯಾವುದೇ ಪಾತ್ರ ನಿರ್ವಹಿಸಲು ನಾನು ಸಿದ್ಧ. ನನ್ನನ್ನು ಭೇಟಿಯಾದ ಮುಸ್ಲಿಂ ನಾಯಕರ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಪ್ರೀತಿ, ಏಕತೆ ಮತ್ತು ಶಾಂತಿ ದೇಶದ ಪ್ರಧಾನ ಉದ್ದೇಶವಾಗಿರಬೇಕು’ ಎಂದು ರಜನಿ ಹೇಳಿದ್ದಾರೆ.

ADVERTISEMENT

ಭಾನುವಾರ ಬೆಳಿಗ್ಗೆ ‘ತಮಿಳ್‌ ನಾಡು ಜಾಮಾ ಉಯಮಾ ಸಬಾಯ್‌’ ಸಂಘಟನೆಯ ಮುಖಂಡರನ್ನು ಪೊಯೆಸ್‌ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ರಜನಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಬಗ್ಗೆ ರಜನಿಕಾಂತ್‌ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ತೆರಳಿ ಎಂದು ಕೇಂದ್ರ ಸರ್ಕಾರದ ನಾಯಕರನ್ನು ಉದ್ದೇಶಿಸಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.