ADVERTISEMENT

ಬರವಣಿಗೆಯ ಪ್ರತಿಭೆ ಹರಿವಂಶ ನಾರಾಯಣ ಸಿಂಗ್‌ಗೆ ಅಭಿನಂದನೆ: ಮೋದಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 7:41 IST
Last Updated 9 ಆಗಸ್ಟ್ 2018, 7:41 IST
ರಾಜ್ಯಸಭೆ ನೂತನ ಸಭಾಪತಿ ಹರಿವಂಶ ನಾರಾಯಣ ಸಿಂಗ್‌, ಪ್ರಧಾನಿ ನರೇಂದ್ರ ಮೋದಿ
ರಾಜ್ಯಸಭೆ ನೂತನ ಸಭಾಪತಿ ಹರಿವಂಶ ನಾರಾಯಣ ಸಿಂಗ್‌, ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ:ರಾಜ್ಯಸಭೆ ಉಪ ಸಭಾಪತಿಯಾಗಿ ಗುರುವಾರ ಆಯ್ಕೆಯಾದ ಎನ್‌ಡಿಎ ಅಭ್ಯರ್ಥಿ ಹರಿವಂಶನಾರಾಯಣ ಸಿಂಗ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಪಕ್ಷಗಳ ಮುಖಂಡರು ಸದನದಲ್ಲಿ ಅಭಿನಂದನೆ ಸಲ್ಲಿಸಿದರು.

‘ನಾನು ಇಡೀ ಸದನದ ಪರವಾಗಿ ಹರಿವಂಶ ನಾರಾಯಣ ಸಿಂಗ್‌ ಅವರನ್ನು ಅಭಿನಂದಿಸುತ್ತೇನೆ. ಅವರು ಬರವಣಿಗೆಯ ಪ್ರತಿಭೆ ಮೂಲಕ ಆಶೀರ್ವಾದ ಪಡೆದಿದ್ದಾರೆ’ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ‘ಜತೆಗೆ, ಹರಿವಂಶ ನಾರಾಯಣ ಸಿಂಗ್‌ಅವರು ಮಾಜಿ ಪ್ರಧಾನಿ ಚಂದ್ರಶೇಖರ್‌ ಅವರ ನೆಚ್ಚಿನ ವ್ಯಕ್ತಿಯಾಗಿದ್ದವರು’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಆಯ್ಕೆ ಬಳಿಕ ನರೇಂದ್ರ ಮೋದಿ ಅವರು ಸದನದಲ್ಲಿ ಎನ್‌ಡಿಎ ಅಭ್ಯರ್ಥಿ, ನೂತನ ಉಪ ಸಭಾಪತಿ ಹರಿವಂಶ್‌ ನಾರಾಯಣ್‌ ಅವರ ಬಳಿಗೆ ತೆರಳಿ ಅಭಿನಂದನೆ ಸಲ್ಲಿಸಿದರು. ಸಚಿವ ಅನಂತ್‌ ಕುಮಾರ್‌ ಸೇರಿದಂತೆ ವಿ‍ಪಕ್ಷಗಳ ಸದಸ್ಯರೂ ಅಭಿನಂದಿಸಿದರು.

ADVERTISEMENT

* ಇದನ್ನೂ ಓದಿ...

ಸದನದಲ್ಲಿಹರಿವಂಶ ನಾರಾಯಣ ಸಿಂಗ್‌.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಒಟ್ಟು 230 ಮತಗಳು ಚಲಾವಣೆಯಾದವು. ಈ ಮತಗಳ ಪೈಕಿ ಎನ್‌ಡಿಎ ಅಭ್ಯರ್ಥಿ, ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್‌ ಅವರು 125 ಮತ ಪಡೆದು ಗೆಲುವು ಸಾಧಿಸಿದರು. ವಿರುದ್ಧವಾಗಿ(ಬಿ.ಕೆ.ಹರಿಪ್ರಸಾಸ್‌ ಪರ) 105 ಮತ ಬಿದ್ದವು. ಇಬ್ಬರು ಸದಸ್ಯರು ಗೈರಾಗಿದ್ದರು.

ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಯ್ಕೆಯನ್ನು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.