ADVERTISEMENT

ಪ್ರಾಣ ಪ್ರತಿಷ್ಠಾಪನೆ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಗೆ ಅರ್ಧ ದಿನ ರಜೆ

ಪಿಟಿಐ
Published 19 ಜನವರಿ 2024, 15:30 IST
Last Updated 19 ಜನವರಿ 2024, 15:30 IST
<div class="paragraphs"><p>ನವದೆಹಲಿಯ ಸರ್ದಾರ್ ಬಜಾರ್‌ನ ಧ್ವಜಗಳ ತಯಾರಕ ಹಾಗೂ ವ್ಯಾಪಾರಿ ಅಬ್ದುಲ್ ಗಫರ್‌ ಅನ್ಸಾರಿ ಅವರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಿದ್ಧಗೊಂಡಿರುವ ಧ್ವಜಗಳನ್ನು ಶುಕ್ರವಾರ ಸಜ್ಜುಗೊಳಿಸಿದರು.</p></div>

ನವದೆಹಲಿಯ ಸರ್ದಾರ್ ಬಜಾರ್‌ನ ಧ್ವಜಗಳ ತಯಾರಕ ಹಾಗೂ ವ್ಯಾಪಾರಿ ಅಬ್ದುಲ್ ಗಫರ್‌ ಅನ್ಸಾರಿ ಅವರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಿದ್ಧಗೊಂಡಿರುವ ಧ್ವಜಗಳನ್ನು ಶುಕ್ರವಾರ ಸಜ್ಜುಗೊಳಿಸಿದರು.

   

ಪಿಟಿಐ ಚಿತ್ರ

ನವದೆಹಲಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹಾಗೂ ಅದಕ್ಕೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಗೆ ಜ. 22ರಂದು ಅರ್ಧ ದಿನ ರಜೆ ನೀಡಲಾಗಿದೆ.

ADVERTISEMENT

ಈ ಕುರಿತು ಗುರುವಾರ ಪ್ರಕಟಣೆ ಹೊರಡಿಸಿರುವ ವಿಶ್ವವಿದ್ಯಾಲಯವು, ‘ಪ್ರಾಣ ಪ್ರತಿಷ್ಠಾಪನೆಗಾಗಿ ಅರ್ಧ ದಿನ ರಜೆ ನೀಡಲಾಗಿದೆ. ಆದಾಗ್ಯೂ, ಪೂರ್ವನಿಗದಿತ ಪರೀಕ್ಷೆ ಹಾಗೂ ಸಭೆಗಳು ಎಂದಿನಂತೆ ನಡೆಯಲಿವೆ’ ಎಂದಿದೆ.

‘ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಿಬ್ಬಂದಿಗೆ ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಿದೆ. ಎಲ್ಲಾ ಕೇಂದ್ರ ಸರ್ಕಾರದ ಕಚೇರಿ ಹಾಗೂ ಸಂಸ್ಥೆಗಳಿಗೆ ಅರ್ಧ ದಿನ ಮಧ್ಯಾಹ್ನ 2.30ರವರೆಗೆ ರಜೆ ಘೋಷಿಸಲಾಗಿದೆ. ಹೀಗಾಗಿ ವಿಶ್ವವಿದ್ಯಾಲಯಕ್ಕೂ ಈ ಅವಧಿಯಲ್ಲಿ ರಜೆ ನೀಡಲಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.