ADVERTISEMENT

ಕೆಂಪುಕೋಟೆ ಸಮೀಪ ಕಾರು ಸ್ಫೋಟ ಪ್ರಕರಣ: ರಷೀದ್ ಅಲಿ NIA ಕಸ್ಟಡಿ 7 ದಿನ ವಿಸ್ತರಣೆ

ಪಿಟಿಐ
Published 2 ಡಿಸೆಂಬರ್ 2025, 13:43 IST
Last Updated 2 ಡಿಸೆಂಬರ್ 2025, 13:43 IST
<div class="paragraphs"><p>ನ್ಯಾಯಾಲಯದ ಮುಂದೆ ಹಾಜರಾದ ರಷೀದ್‌ ಅಲಿ</p></div>

ನ್ಯಾಯಾಲಯದ ಮುಂದೆ ಹಾಜರಾದ ರಷೀದ್‌ ಅಲಿ

   

–ಪಿಟಿಐ ಚಿತ್ರ

ನವದೆಹಲಿ: ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟದ ಆರೋಪಿಗಳಲ್ಲಿ ಒಬ್ಬನಾದ ರಷೀದ್‌ ಅಲಿಯನ್ನು ದೆಹಲಿಯ ಪಟಿಯಾಲ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಲಾಯಿತು.

ADVERTISEMENT

ನವೆಂಬರ್‌ 26ರಂದು ಅಲಿಯನ್ನು ನ್ಯಾಯಾಲಯವು ಒಂದು ವಾರ ಎನ್‌ಐಎ ವಶಕ್ಕೆ ಒಪ್ಪಿಸಿತ್ತು. ಮಂಗಳವಾರಕ್ಕೆ ಈ ಅವಧಿ ಮುಕ್ತಾಯಗೊಂಡಿತ್ತು. ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ನೀಡುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಪರಿಗಣಿಸಿದ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಅಂಜು ಬಜಾಜ್‌ ಚಂದ್ನಾ, ಮತ್ತೆ ಒಂದು ವಾರ ಅವಧಿ ವಿಸ್ತರಿಸಿದರು.

ಕೆಂಪುಕೋಟೆ ಸಮೀಪ ಸ್ಫೋಟಗೊಂಡ ಕಾರು ರಷೀದ್‌ ಅಲಿಯ ಹೆಸರಿನಲ್ಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎನ್‌ಐಎ 7 ಮಂದಿಯನ್ನು ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.