ಲಖನೌ: ಪ್ರತಿಭಟನಾ ನಿರತ ರೈತರ ನಂಬಿಕೆಯನ್ನು ಗೆಲ್ಲಲು ಸರ್ಕಾರ ವಿಫಲವಾಗಿರುವಾಗ ಬಿಜೆಪಿಯ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆಯನ್ನು ಜನರು ಏಕೆ ನಂಬಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಭಾನುವಾರ ಪ್ರಶ್ನಿಸಿದ್ದಾರೆ.
'ಬಿಜೆಪಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ ಆದರೆ, ದೇಶದ ರೈತರು ಇಷ್ಟು ದೀರ್ಘ ಕಾಲದಿಂದ ಮೂರು ಕೃಷಿ ಕಾನೂನುಗಳ ವಿರುದ್ಧ ತೀವ್ರವಾಗಿ ಪ್ರತಿಭಟಿಸುತ್ತಿರುವಾಗ ಮತ್ತು ಆಕ್ರೋಶಗೊಂಡಿರುವಾಗ ಜನರು ಈ ‘ಜುಮ್ಲಾ’ (ವಾಕ್ಚಾತುರ್ಯ) ವನ್ನು ಹೇಗೆ ನಂಬುತ್ತಾರೆ?' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
'ಮೂರು ವರ್ಷಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೇಗೆ ಕಡಿತಗೊಳಿಸಲಾಗಿದೆಯೋ ಅದೇ ರೀತಿ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುತ್ತದೆ ಮತ್ತು ದೀಪಾವಳಿ ಉಡುಗೊರೆಯಾಗಿ ರೈತರಿಗೆ ಮುಕ್ತಿ ನೀಡಲಿ ಎಂಬುದನ್ನು ಬಿಎಸ್ಪಿ ವರಿಷ್ಠರು ನಿರೀಕ್ಷಿಸುತ್ತಿರುವುದಾಗಿ' ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.