ADVERTISEMENT

ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ರೈತರಿಗೆ ಮುಕ್ತಿ ನೀಡಿ: ಮಾಯಾವತಿ

ಪಿಟಿಐ
Published 7 ನವೆಂಬರ್ 2021, 13:11 IST
Last Updated 7 ನವೆಂಬರ್ 2021, 13:11 IST
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ   

ಲಖನೌ: ಪ್ರತಿಭಟನಾ ನಿರತ ರೈತರ ನಂಬಿಕೆಯನ್ನು ಗೆಲ್ಲಲು ಸರ್ಕಾರ ವಿಫಲವಾಗಿರುವಾಗ ಬಿಜೆಪಿಯ ‘ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆಯನ್ನು ಜನರು ಏಕೆ ನಂಬಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಭಾನುವಾರ ಪ್ರಶ್ನಿಸಿದ್ದಾರೆ.

'ಬಿಜೆಪಿಯವರು ‘ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ ಆದರೆ, ದೇಶದ ರೈತರು ಇಷ್ಟು ದೀರ್ಘ ಕಾಲದಿಂದ ಮೂರು ಕೃಷಿ ಕಾನೂನುಗಳ ವಿರುದ್ಧ ತೀವ್ರವಾಗಿ ಪ್ರತಿಭಟಿಸುತ್ತಿರುವಾಗ ಮತ್ತು ಆಕ್ರೋಶಗೊಂಡಿರುವಾಗ ಜನರು ಈ ‘ಜುಮ್ಲಾ’ (ವಾಕ್ಚಾತುರ್ಯ) ವನ್ನು ಹೇಗೆ ನಂಬುತ್ತಾರೆ?' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

'ಮೂರು ವರ್ಷಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೇಗೆ ಕಡಿತಗೊಳಿಸಲಾಗಿದೆಯೋ ಅದೇ ರೀತಿ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುತ್ತದೆ ಮತ್ತು ದೀಪಾವಳಿ ಉಡುಗೊರೆಯಾಗಿ ರೈತರಿಗೆ ಮುಕ್ತಿ ನೀಡಲಿ ಎಂಬುದನ್ನು ಬಿಎಸ್‌ಪಿ ವರಿಷ್ಠರು ನಿರೀಕ್ಷಿಸುತ್ತಿರುವುದಾಗಿ' ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.