ADVERTISEMENT

ವಾದ್ರಾ ಜಾಮೀನು ರದ್ದತಿಗೆ ಕೋರಿಕೆ

ಪಿಟಿಐ
Published 24 ಮೇ 2019, 16:10 IST
Last Updated 24 ಮೇ 2019, 16:10 IST
   

ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಉದ್ಯಮಿ ರಾಬರ್ಟ್‌ ವಾದ್ರಾ ಅವರ ಜಾಮೀನು ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಜಾಮೀನು ನೀಡುವುದರಿಂದ ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂದು ಜಾರಿ ನಿರ್ದೇಶನಾಲಯ ಪರ ವಕೀಲ ಡಿ.ಪಿ. ಸಿಂಗ್‌ ಅರ್ಜಿಯಲ್ಲಿ ತಿಳಿಸಿದ್ದಾರೆ.

ಸೋಮವಾರ ಅರ್ಜಿಯ ವಿಚಾರಣೆ ನಡೆಯಲಿದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾಗಿರುವ ವಾದ್ರಾ ಅವರ ಸ್ಕೈಲೈಟ್‌ ಹಾಸ್ಪಿಟಲಿಟಿ ಎಲ್‌ಎಲ್‌ಪಿಯ ಉದ್ಯೋಗಿ ಮನೋಜ್‌ ಅರೋರಾ ಜಾಮೀನು ಮಂಜೂರಾತಿಯನ್ನು ಸಹ ಜಾರಿ ನಿರ್ದೇಶನಾಲಯ ಪ್ರಶ್ನೆ ಮಾಡಿದೆ. ಲಂಡನ್‌ನಲ್ಲಿ ಖರೀದಿಸಲಾದ ಆಸ್ತಿ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪವನ್ನು ವಾದ್ರಾ ಎದುರಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.