ಅಮರಾವತಿ:1985ರ ಬ್ಯಾಚ್ನ ಐಎಎಸ್ ಅಧಿಕಾರಿ ಡಾ.ಸಮೀರ್ ಶರ್ಮಾ ಅವರು ಆಂಧ್ರ ಪ್ರದೇಶದ ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.
ಈವರೆಗೆ ಮುಖ್ಯಕಾರ್ಯದರ್ಶಿಯಾಗಿದ್ದ1987ರ ಬ್ಯಾಚ್ನ ಅಧಿಕಾರಿ ಆದಿತ್ಯನಾಥ್ ದಾಸ್ ಅವರು ಇತ್ತೀಚೆಗೆ ನಿವೃತ್ತರಾದರು. ಅವರ ಸ್ಥಾನಕ್ಕೆ ಶರ್ಮಾ ನೇಮಕವಾಗಿದ್ದಾರೆ.
ಶರ್ಮಾ ಅವರು ಈ ವರ್ಷದ ನವೆಂಬರ್30ರಂದು ನಿವೃತರಾಗಲಿದ್ದಾರೆ. ಆದಾಗ್ಯೂ ಅವರಸೇವಾವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರದ ಅಧಿಕಾರಿಯಾಗಿ ಭಾರತೀಯಕಾರ್ಪೊರೇಟ್ ವ್ಯವಹಾರಗಳ ಸಂಸ್ಥೆಯ ನಿರ್ದೇಶಕರಾಗಿದ್ದ ಅವರು ರಾಜ್ಯ ಕೇಡರ್ಗೆ ಈ ವರ್ಷದ ಜುಲೈನಲ್ಲಿ ಮರಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.