ADVERTISEMENT

ನಿರಪರಾಧಿಯಾಗಿದ್ದರೆ ಭಯವೇಕೆ? - ಏಕನಾಥ ಶಿಂದೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 20:15 IST
Last Updated 31 ಜುಲೈ 2022, 20:15 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ಮುಂಬೈ: ‘ಯಾವ ಅಕ್ರಮವನ್ನೂ ಎಸಗಿಲ್ಲ ಎಂದು ರಾವುತ್‌ ಘೋಷಿಸಿಕೊಂಡಿದ್ದಾರೆ. ಅವರು ನಿರಪರಾಧಿಯೇ ಆಗಿದ್ದರೆ ತನಿಖೆಗೆ ಏಕೆ ಹೆದರುತ್ತಿದ್ದಾರೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರುಔರಂಗಾಬಾದ್‌ನಲ್ಲಿ ಹೇಳಿದ್ದಾರೆ.

ರಾವುತ್‌ ಅವರು ಮಾಡಿರುವ ಟ್ವೀಟ್‌ ಉಲ್ಲೇಖಿಸಿ ಮಹಾರಾಷ್ಟ್ರ ಬಿಜೆಪಿಯ ಹಲವು ನಾಯಕರೂ ಹೇಳಿಕೆ ನೀಡಿದ್ದಾರೆ. ‘ಸಂಜಯ್‌ ರಾವುತ್‌ ಅವರು ಅನಗತ್ಯವಾಗಿ ಬಾಳಾಸಾಹೇಬ್‌ ಠಾಕ್ರೆ ಅವರ ಹೆಸರನ್ನು ಮಧ್ಯ ತರುತ್ತಿದ್ದಾರೆ ಮತ್ತು ಸೇನಾ ಕಾರ್ಯಕರ್ತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ತಪ್ಪು ಮಾಡಿಲ್ಲ ಎಂದಾದರೆ ಅವರು ಯಾವುದಕ್ಕೂ ಹೆದರಬಾರದು. ಸರ್ಕಾರ ಮತ್ತು ನ್ಯಾಯಾಂಗದ ಮೇಲೆ ಜನರು ವಿಶ್ವಾಸ ಇರಿಸಬೇಕು’ ಎಂದು ಮಹಾರಾಷ್ಟ್ರ ಮಾಜಿ ಸಚಿವ ಗಿರೀಶ್‌ ಮಹಾಜನ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT