
ಪಿಟಿಐ
ಮುಂಬೈ: ಎನ್ಸಿಪಿ (ಅಜಿತ್ ಪವಾರ್ ಬಣ) ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಅವರು ತಮ್ಮ ಪಕ್ಷಕ್ಕಿಂತಲೂ ಬಿಜೆಪಿಗೆ ಹೆಚ್ಚು ಹತ್ತಿರವಾಗಿದ್ದಾರೆ ಎಂದಿರುವ ಶಿವಸೇನಾ ನಾಯಕ (ಉದ್ಧವ್ ಬಣ) ಸಂಜಯ್ ರಾವುತ್, ಮಹಾರಾಷ್ಟ್ರ ಮತ್ತು ಮರಾಠರಿಗೆ ಸ್ವೀಕಾರಾರ್ಹವಾದುದ್ದನ್ನಷ್ಟೇ ಮಾಡಬೇಕು ಎಂದು ಹೇಳಿದ್ದಾರೆ.
ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ತಟಕರೆ ಸಹ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದಿರುವ ಅವರು, ‘ಎನ್ಸಿಪಿ ಪವಾರ್ಗಳಿಗೆ ಸೇರಿದ್ದು, ಪಟೇಲ್ಗಳಿಗೆ ಅಲ್ಲ. ತಮ್ಮ ಪಕ್ಷದ ನಾಯಕರಾಗಿರುವುದಕ್ಕಿಂತ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ದೊಡ್ಡ ಭಕ್ತರಾಗಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.
ಶರದ್ ಪವಾರ್ ಮತ್ತು ಬಾಳಾ ಠಾಕ್ರೆ ಸ್ಥಾಪಿಸಿದ ಎನ್ಸಿಪಿ ಮತ್ತು ಶಿವಸೇನಾದ ವಿಭಜನೆಗೆ ಬಿಜೆಪಿಯೇ ಪ್ರಮುಖ ಕಾರಣ ಎಂದು ರಾವುತ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.