ನವದೆಹಲಿ: ಅಪಘಾತದಲ್ಲಿ ವಾಹನ ಜಖಂಗೊಂಡಿದ್ದ ಪ್ರಕರಣದಲ್ಲಿ ವ್ಯಕ್ತಿಗೆ ₹3.25 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪ್ರಕರಣದಲ್ಲಿ ಪರಿಹಾರ ತಿರಸ್ಕರಿಸಿ ಎನ್ಸಿಡಿಆರ್ಸಿ ನೀಡಿದ್ದ ಆದೇಶ ಊರ್ಜಿತವಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತ, ವಿ.ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠವು ರಾಷ್ಟ್ರೀಯ ಗ್ರಾಹಕ ಪರಿಹಾರ ವ್ಯಾಜ್ಯ ಆಯೋಗದ (ಎನ್ಸಿಡಿಆರ್ಸಿ) ಆದೇಶ ಊರ್ಜಿತವಲ್ಲ. ವಿಮಾ ಸಂಸ್ಥೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಸಂಸ್ಥೆಯು ವ್ಯಕ್ತಿಗೆ ಪರಿಹಾರ ನೀಡಬೇಕು ಎಂದು ಸೂಚಿಸಿತು.
ಸರಕು ಸಾಗಣೆ ವಾಹನಕ್ಕೆ ಸಂಬಂಧಿಸಿದಂತೆ ಥರ್ಡ್ ಪಾರ್ಟಿ ಕ್ಲೇಮಿಗೆ ಅನ್ವಯಿಸಿ ಪರಿಹಾರ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಾಲನೆಗೆ ಸಂಬಂಧಿಸಿ ಸ್ಪಷ್ಟ ವ್ಯತ್ಯಾಸವಿದೆ. ಇಲ್ಲಿ, ಸ್ವಯಂ ಜಖಂಗೊಂಡಿರುವ ಪ್ರಕರಣ. ಹೀಗಾಗಿ, ಇಲ್ಲಿ ಎಷ್ಟು ಜನರು ಪ್ರಯಾಣಿಸುತ್ತಿದ್ದರು ಎಂಬುದು ಅನ್ವಯಿಸುವುದಿಲ್ಲ. ಹೀಗಾಗಿ, ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಆದೇಶ ಊರ್ಜಿವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ಅಣ್ಣಪ್ಪ ಎಂಬುವರು ಎನ್ಸಿಡಿಆರ್ಸಿ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರಂದು ಈ ಆದೇಶ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.