ADVERTISEMENT

ತೀಸ್ತಾ ಜಾಮೀನು ಅರ್ಜಿ: ಗುಜರಾತ್‌ ಸರ್ಕಾರಕ್ಕೆ ಸುಪ್ರಿಂ ನೋಟಿಸ್‌

ಪಿಟಿಐ
Published 22 ಆಗಸ್ಟ್ 2022, 11:19 IST
Last Updated 22 ಆಗಸ್ಟ್ 2022, 11:19 IST
ತೀಸ್ತಾ ಸೆಟಲ್‌ವಾಡ್‌
ತೀಸ್ತಾ ಸೆಟಲ್‌ವಾಡ್‌   

ನವದೆಹಲಿ (ಪಿಟಿಐ): ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಅವರ ಜಾಮೀನು ಅರ್ಜಿ ಕುರಿತಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಗುಜರಾತ್‌ ಸರ್ಕಾರಕ್ಕೆ ಸೋಮವಾರ ನೋಟಿಸ್‌ ನೀಡಿದೆ.

ನ್ಯಾಯಮೂರ್ತಿ ಯು. ಯು. ಲಲಿತ್‌ ಅವರಿದ್ದ ಪೀಠವುಅರ್ಜಿಯ ವಿಚಾರಣೆಯನ್ನು ಆಗಸ್ಟ್‌ 25ಕ್ಕೆ ನಿಗದಿ ಮಾಡಿದೆ. ಆಗಸ್ಟ್‌ 3ರಂದು ಗುಜರಾತ್‌ ಹೈಕೋರ್ಟ್‌ ಕೂಡ ತೀಸ್ತಾ ಅವರ ಜಾಮೀನು ಅರ್ಜಿ ಸಂಬಂಧ ಪ್ರತಿಕ್ರಿಯೆ ದಾಖಲಿಸುವಂತೆ ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್‌ 19ಕ್ಕೆ ಮುಂದೂಡಿತ್ತು.

ಮುಂದಿನ ವಿಚಾರಣೆಯನ್ನು ಗುಜರಾತ್‌ ಹೈಕೋರ್ಟ್‌ತುಂಬಾ ದಿನಗಳವರೆಗೆ ಮುಂದೂಡಿದ್ದನ್ನು ಆಕ್ಷೇಪಿಸಿ ತೀಸ್ತಾ ಅವರು ಸುಪ್ರಿಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. 2002ರ ಗುಜರಾತ್‌ ಗಲಭೆ ಪ್ರಕರಣದಲ್ಲಿ ‘ಮುಗ್ದ ಜನರನ್ನು’ ಸಾಕ್ಷ್ಯಗಳನ್ನಾಗಿ ತಯಾರು ಮಾಡಿದ್ದಾರೆ ಎಂದು ಆರೋಪಿಸಿ ತೀಸ್ತಾ ಅವರನ್ನು ಇದೇ ಜೂನ್‌ನಲ್ಲಿ ಬಂಧಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.