ತಿರುವನಂತಪುರ: ಡಿಸೆಂಬರ್ 26 ಗುರುವಾರದಂದು ಸೂರ್ಯಗ್ರಹಣ ಇರುವುದರಿಂದ ದೇವಸ್ಥಾನದ ಬಾಗಿಲನ್ನು ನಾಲ್ಕು ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಶಬರಿಮಲೆ ದೇವಸ್ಥಾನದ ಮಂಡಳಿ ತಿಳಿಸಿದೆ.
ಗ್ರಹಣವು ಬೆಳಿಗ್ಗೆ 8.06ರಿಂದ 11.13 ವರೆಗೆ ಇರಲಿದೆ. ದೇವಸ್ಥಾನವು ಬೆಳಿಗ್ಗೆ 7.30ರಿಂದ 11.30ವರೆಗೆ ಮುಚ್ಚಲಿದೆ ಎಂದು ಮಂಡಳಿ ಹೇಳಿದೆ.
‘ನಿತ್ಯ ಪೂಜೆಯ ಬಳಿಕ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ಗ್ರಹಣ ಕಳೆದ ಬಳಿಕ ಮಾಡುವ ಪೂಜಾವಿಧಿಗಳ ನಂತರ ಬಾಗಿಲು ತೆರೆಯಲಾಗುವುದು’ ಎಂದು ದೇವಸ್ಥಾನದ ಕಾರ್ಯನಿರ್ವಾಹಣ ಅಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.