ADVERTISEMENT

ಪುಣೆ| ಸುನೇತ್ರ ಭೇಟಿ ಮಾಡಿದ ಶರದ್‌ ಪವಾರ್

ಪಿಟಿಐ
Published 4 ಫೆಬ್ರುವರಿ 2026, 16:08 IST
Last Updated 4 ಫೆಬ್ರುವರಿ 2026, 16:08 IST
<div class="paragraphs"><p>ಅಜಿತ್ ಪವಾರ್‌,&nbsp;ಸುನೇತ್ರ ಪವಾರ್‌</p></div>

ಅಜಿತ್ ಪವಾರ್‌, ಸುನೇತ್ರ ಪವಾರ್‌

   

ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಬಾರಾಮತಿಯಲ್ಲಿರುವ ಮನೆಗೆ ಬುಧವಾರ ಭೇಟಿ ನೀಡಿದ ಎನ್‌ಸಿಪಿ(ಎಸ್‌ಪಿ) ‌ಅಧ್ಯಕ್ಷ ಶರದ್ ಪವಾರ್, ಸಹೋದರನ ಪುತ್ರ, ಮಾಜಿ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ಗೆ ಗೌರವ ಸಲ್ಲಿಸಿದರು.

ಮಂಗಳವಾರ ತಡರಾತ್ರಿ ಬಾರಾಮತಿ ತಲುಪಿದ ಶರದ್ ಪ್ರವಾರ್ ಅವರು ನಗರದ ಸಹಯೋಗ್ ಸೊಸೈಟಿಯಲ್ಲಿ ಆಯೋಜಿಸಿದ್ದ ಅಜಿತ್‌ಪವಾರ್ ಸಂತಾಪ ಸಭೆಯಲ್ಲಿ ಪಾಲ್ಗೊಂಡರು.

ADVERTISEMENT

ಬುಧವಾರ ಬೆಳಿಗ್ಗೆ ಬಾರಾಮತಿಯಲ್ಲಿರುವ ವಿದ್ಯಾ ಪ್ರತಿಷ್ಠಾನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪಾರ್ಥ್ ಮತ್ತು ಜಯ್‌ ನಡುವೆ ಗೋಪ್ಯ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ಈ ಸಭೆಯ ಕಾರ್ಯಸೂಚಿ ಏನು ಎಂಬುದರ ಕುರಿತು ತಕ್ಷಣಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಎನ್‌ಸಿಪಿ ಎರಡೂ ಬಣಗಳ ವಿಲೀನ ಮತ್ತು ಮುಂಬರುವ ಜಿಲ್ಲಾ ಪರಿಷತ್ ಚುನಾವಣೆಗಳ ಬಗ್ಗೆ ಚರ್ಚೆಗಳು ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.