ADVERTISEMENT

ಲೋಕತಾಂತ್ರಿಕ ಜನತಾ ದಳ ಪಕ್ಷ ತೊರೆದ ಅರುಣ್‌ ಶ್ರೀವಾಸ್ತವ

ಪಿಟಿಐ
Published 3 ಫೆಬ್ರುವರಿ 2021, 10:42 IST
Last Updated 3 ಫೆಬ್ರುವರಿ 2021, 10:42 IST
ಶರದ್‌ ಯಾದವ್‌
ಶರದ್‌ ಯಾದವ್‌   

ನವದೆಹಲಿ: ಲೋಕತಾಂತ್ರಿಕ ಜನತಾ ದಳ ಪಕ್ಷದ ಮುಖ್ಯಸ್ಥ ಶರದ್‌ ಯಾದವ್‌ ಅವರ ನಿಕಟ ಸಹಚರರೊಬ್ಬರು ಪಕ್ಷ ತೊರೆದಿದ್ಧಾರೆ.

ಲೋಕತಾಂತ್ರಿಕ ಜನತಾ ದಳ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‌ ಶ್ರೀವಾಸ್ತವ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

‘ಲೋಕತಾಂತ್ರಿಕ ಜನತಾ ದಳ ಪಕ್ಷವು ಮರೆಯಾಗುತ್ತಿದೆ. ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಶರದ್‌ ಯಾದವ್‌ ಅವರ ಮಗಳು ಸುಭಾಷಿನಿ ರಾವ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಇದು ಲೋಕತಾಂತ್ರಿಕ ಜನತಾ ದಳದ ಅಸ್ತಿತ್ವದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮೂಡಿಸಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.