ADVERTISEMENT

ಸಂಸದ ಶತ್ರುಘ್ನ ಸಿನ್ಹಾ ಯೂ–ಟರ್ನ್‌ನಿಂದ ಉಪಯೋಗವಿಲ್ಲ: ಬಿಜೆಪಿ ಮುಖಂಡರು

ಮೋದಿಯ ಹೊಗಳಿದ ಮುಖಂಡ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 15:59 IST
Last Updated 22 ಫೆಬ್ರುವರಿ 2019, 15:59 IST
   

ಪಟ್ನಾ: ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳ ಬಗ್ಗೆ ಸದಾ ಟೀಕೆ ಮಾಡುತ್ತಿದ್ದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಈಗ ಎರಡನೇ ಬಾರಿ ಪ್ರಧಾನಿಯನ್ನು ಹೊಗಳಿದ್ದಾರೆ.ಆದರೆ ಸಿನ್ಹಾ ಅವರ ಹೊಗಳಿಕೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಪಟ್ನಾ ಮೆಟ್ರೊ ರೈಲು ಯೋಜನೆ ಆರಂಭಿಸಿದ್ದಕ್ಕಾಗಿ ಎರಡು ದಿನಗಳ ಹಿಂದೆ ಪ್ರಧಾನಿಯನ್ನು ಸಿನ್ಹಾ ಹೊಗಳಿದ್ದರು. ಈಗ ಜಾರ್ಖಂಡ್‌ನಲ್ಲಿ ಮೂರು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದ್ದಾಗಿ ಪ್ರಧಾನಿಯನ್ನು ಅವರು ಅಭಿನಂದಿಸಿದ್ದಾರೆ.

‘ಇಂತಹ ಪ್ರೋತ್ಸಾಹದ ಮಾತುಗಳಿಗಾಗಿ ಶತ್ರುಘ್ನ ಸಿನ್ಹಾ ಅವರಗೆ ಅಬಾರಿಯಾಗಿರುತ್ತೇವೆ. ಪ್ರಧಾನಿಯಲ್ಲಿ ನಂಬಿಕೆ ಇರಿಸುವವರನ್ನು ನಾವು ಪ್ರೀತಿಯಿಂದಲೇ ಕಾಣುತ್ತೇವೆ. ಆದರೆ ಇಂತಹ ಯೂ–ಟರ್ನ್‌ನಿಂದ ಪಟ್ನಾ ಸಾಹಿಬ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಖಾತರಿಯಾಗುವುದಿಲ್ಲ’ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರಾಯ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.