ADVERTISEMENT

ಶೀನಾ ಬೋರಾ ಹತ್ಯೆ ಪ್ರಕರಣ: ಆರೋಪಿಗೆ ಜಾಮೀನು

ಪಿಟಿಐ
Published 20 ಆಗಸ್ಟ್ 2022, 10:37 IST
Last Updated 20 ಆಗಸ್ಟ್ 2022, 10:37 IST
ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿ   

ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಶ್ಯಾಮವರ್ ರಾಯ್‌ಗೆ ಬಾಂಬೆ ಹೈಕೋರ್ಟ್‌ ಶನಿವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಯ ಕಾರು ಚಾಲಕನಾಗಿದ್ದ ಶ್ಯಾಮವರ್‌, ಹತ್ಯೆಯ ರಹಸ್ಯವನ್ನು ಮುಂಬೈ ಪೊಲೀಸರ ಎದುರು ಬಾಯ್ಬಿಟ್ಟಿದ್ದ. ಆತನ ಹೇಳಿಕೆ ಆಧಾರದಲ್ಲಿ 2015ರಲ್ಲಿ ಇಂದ್ರಾಣಿ, ಆತನ ಪತಿ ಸಂಜೀವ್‌ ಖನ್ನಾ ಅವರನ್ನು ಬಂಧಿಸಲಾಗಿತ್ತು.

ಪೀಟರ್‌ ಮುಖರ್ಜಿ ಸೇರಿದಂತೆ ಪ್ರಕರಣದ ಇತರ ಆರೋಪಿಗಳೆಲ್ಲಾ ಜಾಮೀನಿನ ಮೇಲೆ ಈ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.