ADVERTISEMENT

ಎಲ್ಲರಿಗೂ ಸ್ವಾಗತ ಅನ್ನುವ ಒಂದಾದರೂ ದೇಶ ತೋರಿಸಿ: ಸಿಎಎ ಬಗ್ಗೆ ಜೈಶಂಕರ್ 

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 11:25 IST
Last Updated 7 ಮಾರ್ಚ್ 2020, 11:25 IST
ವಿದೇಶಾಂಗ ಸಚಿವ ಜೈಶಂಕರ್ 
ವಿದೇಶಾಂಗ ಸಚಿವ ಜೈಶಂಕರ್    

ನವದೆಹಲಿ: ವಿದೇಶಾಂಗ ಸಚಿವಜೈಶಂಕರ್ಎಲ್ಲರಿಗೂ ಸ್ವಾಗತ ಅನ್ನುವ ಒಂದಾದರೂ ದೇಶವನ್ನು ತೋರಿಸಿ ಎಂದು ಹೇಳುವ ಮೂಲಕ ಸಿಎಎ ವಿರೋಧಿಸುವವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಮಾನವ ಹಕ್ಕುಗಳ ಆಯೋಗದ ನಿರ್ದೇಶಕರು ಮಾಡಿರುವ ಆರೋಪವನ್ನು ಟೀಕಿಸಿದ ಜೈಶಂಕರ್‌ಈ ಹಿಂದೆ ವಿಶ್ವವಿಸಂಸ್ಥೆ ನಿಯೋಗಕಾಶ್ಮೀರಕ್ಕೆ ಭೇಟಿಮಾಡಿದ್ದ ವರದಿಯ ದಾಖಲೆಗಳನ್ನು ನೋಡುವಂತೆ ಹೇಳಿದ್ದಾರೆ.

ಎಕನಾಮಿಕ್ಸ್‌ ಟೈಮ್ಸ್‌ ಗ್ಲೋಬಲ್‌ ಬ್ಯುಸಿನೇಸ್‌ ಕಾರ್ಯಕ್ರಮದಲ್ಲಿ ಮಾಧ್ಯಮದವರು ಕೇಳಿದ ಸಿಎಎ ಪ್ರಶ್ನೆಗೆ ’ಈ ಕಾಯ್ದೆ ಮೂಲಕ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ, ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಬೇಕು. ಈ ಮೂಲಕ ನಾವು ಯಾವುದೇ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿಲ್ಲ‘ ಎಂದುಜೈಶಂಕರ್ ಸ್ಪಷ್ಟಪಡಿಸಿದರು.

ADVERTISEMENT

ಪ್ರಪಂಚದಲ್ಲಿರುವ ಎಲ್ಲರಿಗೂ ಸ್ವಾಗತ ಎಂದು ಹೇಳುವ ಒಂದು ದೇಶವನ್ನು ನನಗೆ ತೋರಿಸಿ ಎಂದರು.ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ (ಆರ್‌ಸಿಇಪಿ) ಹೊರ ಹೋಗುವುದು ವ್ಯವಹಾರಿಕ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು

ಮಾನವ ಹಕ್ಕುಗಳ ನಿರ್ದೇಶಕರು ಈ ಹಿಂದೆಯೂ ತಪ್ಪು ಹೇಳಿದ್ದರು ಅವರು ದಾಖಲೆಗಳನ್ನು ಒಮ್ಮೆ ನೋಡಲಿ ಎಂದು ಜೈಶಂಕರ್‌ ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.