ADVERTISEMENT

ಕಾಶ್ಮೀರಿ ಪಂಡಿತ ಸಮುದಾಯದ ವ್ಯಕ್ತಿ ಕೊಲೆ: ಆರೋಪಪಟ್ಟಿ ಸಲ್ಲಿಕೆ

ಪಿಟಿಐ
Published 20 ಜನವರಿ 2024, 13:13 IST
Last Updated 20 ಜನವರಿ 2024, 13:13 IST
<div class="paragraphs"><p>ಕೊಲೆ ( ಸಾಂದರ್ಭಿಕ ಚಿತ್ರ)</p></div>

ಕೊಲೆ ( ಸಾಂದರ್ಭಿಕ ಚಿತ್ರ)

   

ಶ್ರೀನಗರ: ‘ಕಳೆದ ವರ್ಷ ನಡೆದಿದ್ದ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ, ಎಟಿಎಂ ಕಾವಲುಗಾರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ತನಿಖಾ ಸಂಸ್ಥೆಯು (ಎಸ್‌ಐಎ) 12 ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ’ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

2023ರ ಫೆಬ್ರುವರಿ 26ರಂದು ದಕ್ಷಿಣ ಕಾಶ್ಮೀರದ ಅಚ್ಚನ್‌ ಪುಲ್ವಾಮಾದಲ್ಲಿ ಸಂಜಯ್‌ ಶರ್ಮಾ ಎಂಬುವವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.  

ADVERTISEMENT

‘ಕಾನೂನು ಸಂಘರ್ಷ ಎದುರಿಸುತ್ತಿರುವ ಮೂವರು ಬಾಲಕರು ಸೇರಿದಂತೆ 13 ಆರೋಪಿಗಳ ಪೈಕಿ, ಸದ್ಯ ಎಂಟು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.