ADVERTISEMENT

ರಾಜಸ್ಥಾನದಲ್ಲಿ ಸಿಂಹಿಣಿ ದಾಳಿ: ಆರು ಜನರಿಗೆ ಗಾಯ

ಪಿಟಿಐ
Published 17 ಜುಲೈ 2022, 16:23 IST
Last Updated 17 ಜುಲೈ 2022, 16:23 IST
ಸಿಂಹಿಣಿ
ಸಿಂಹಿಣಿ    

ಆಮರೇಲಿ: ರಾಜಸ್ಥಾನದ ಆಮರೇಲಿ ಜಿಲ್ಲೆಯಲ್ಲಿ ಗೀರ್‌ ಅರಣ್ಯದಿಂದ ತಪ್ಪಿಸಿಕೊಂಡಿದ್ದ ಸಿಂಹಿಣಿಯೊಂದು ಆರು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.

ಆಮರೇಲಿ ಜಿಲ್ಲೆಯಜಾಫರ್‌ಬಾರ್ ಎಂಬ ಅರಣ್ಯ ವಲಯದ ಬಾಬರಕೋಟ್ ಎಂಬ ಹಳ್ಳಿಯಲ್ಲಿ ಈ ಘಟನೆ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.

ಸಿಂಹಿಣಿ ಶನಿವಾರ ಬೆಳಿಗ್ಗೆ ಮೂವರ ಮೇಲೆ ದಾಳಿ ಮಾಡಿತ್ತು. ಮತ್ತೆ ಸಂಜೆ ಅದೇ ಪ್ರದೇಶದಲ್ಲಿ ಮತ್ತೆ ಮೂವರ ಮೇಲೆ ದಾಳಿ ಮಾಡಿದೆ ಎಂದು ಡಿಸಿಎಫ್ ಜಯಂತ್ ಪಟೇಲ್ ತಿಳಿಸಿದ್ದಾರೆ.

ADVERTISEMENT

ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಒಬ್ಬನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಆ ಸ್ಥಳದಲ್ಲಿ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಸಿಂಹಿಣಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜುಲಾ ಶಾಸಕ ಹೀರಾ ಸೋಲಂಕಿ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.