ಕೊಚ್ಚಿ: ಇಲ್ಲಿನ ವಿಮಾನ ವಿಮಾನ ನಿಲ್ದಾಣದಿಂದ ಅಬು ಧಾಬಿಗೆ ತೆರಳಬೇಕಾಗಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿ ವಿಷಪೂರಿತ ಹಾವು ಪತ್ತೆ
ಯಾಗಿದೆ. ಇದರಿಂದ ವಿಮಾನ ಹತ್ತದಂತೆ ಅವರಿಗೆ ನಿರ್ಬಂಧ ವಿಧಿಸಲಾಯಿತು.
ಪಾಲಕ್ಕಾಡ್ ನಿವಾಸಿ ಸುನಿಲ್ ಅವರು ಸ್ಥಳೀಯ ರೈತರಿಂದ ಆಲೂಗಡ್ಡೆ ಖರೀದಿಸಿ ಬ್ಯಾಗ್ನಲ್ಲಿಟ್ಟಿದ್ದರು. ಈ ಬ್ಯಾಗ್ನಲ್ಲೇ ಹಾವು ಪತ್ತೆಯಾಗಿದೆ.
ಭಾನುವಾರ ಸಂಜೆ ಸುನೀಲ್, ಏರ್ ಇಂಡಿಯಾ ಎಕ್ಸ್ಪ್ರೆಸ್ ಮೂಲಕ ಅಬು ಧಾಬಿಗೆ ತೆರಳಬೇಕಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.