ADVERTISEMENT

ಎಸ್‌.ಪಿ ಮುಖಂಡ ಅಪಹರಣ, ಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 18:22 IST
Last Updated 19 ಜೂನ್ 2019, 18:22 IST
ಸಂತೋಷ್ ಪೂನೆಂ
ಸಂತೋಷ್ ಪೂನೆಂ   

ಬಿಜಾಪುರ, ಛತ್ತೀಸ್‌ಗಡ: ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು, ಸಮಾಜವಾದಿ ಪಕ್ಷದ ಮುಖಂಡ ಸಂತೋಷ್ ಪೂನೆಂ ಅವರನ್ನು ಅಪಹರಿಸಿ, ಹತ್ಯೆ ಮಾಡಿದ್ದಾರೆ.

ಗುತ್ತಿಗೆದಾರರೂ ಆಗಿದ್ದ ಸಂತೋಷ್ ಮಂಗಳವಾರ ಸಂಜೆ ಮಾರಿಮಲ್ಲ ಹಳ್ಳಿಯ ರಸ್ತೆ ಕಾಮಗಾರಿ ಮೇಲ್ವಿಚಾರಣೆಗೆ ತೆರಳಿದ್ದರು. ಆ ಸ್ಥಳದಿಂದಲೇ ಅವರನ್ನು ಅಪಹರಿಸಿದ ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಂಗ್ ಪಟೇಲ್ ತಿಳಿಸಿದ್ದಾರೆ.

ಬುಧವಾರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತೋಷ್ ಅವರ ಮೃತ ದೇಹ ಗಮನಿಸಿದ ಸ್ಥಳೀಯರು, ಪೊಲೀಸರಿಗೆ ತಿಳಿಸಿದ್ದರು. ಪೊಲೀಸ್ ಠಾಣೆಯಿಂದ16 ಕಿ.ಮೀ. ದೂರದ ದಟ್ಟ ಕಾಡಿನೊಳಗೆ ಭದ್ರತಾ ಸಿಬ್ಬಂದಿ ತೆರಳಿದ್ದು, ತನಿಖೆ ಕೈಗೊಳ್ಳಲಾಗಿದೆ. ಕಳೆದ ವರ್ಷ ಸಂತೋಷ್‌ಬಿಜಾಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.