ADVERTISEMENT

ಕೋವಿಡ್ ಲಸಿಕೆ ಪೂರೈಕೆ ಸಮಸ್ಯೆಯಿದ್ದರೆ ಆಯಾ ರಾಜ್ಯಗಳು ಹೊಣೆ: ಹರ್ಷವರ್ಧನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜುಲೈ 2021, 10:27 IST
Last Updated 1 ಜುಲೈ 2021, 10:27 IST
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್   

ನವದೆಹಲಿ: ಕೋವಿಡ್-19 ಲಸಿಕೆ ಪೂರೈಕೆ ಬಗ್ಗೆ ಹಲವಾರು ರಾಜ್ಯಗಳ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡಿರುವುದರ ವಿರುದ್ಧ ಗರಂ ಆಗಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಯಾವುದೇ ನಿರ್ದಿಷ್ಟ ರಾಜ್ಯದಲ್ಲಿ ಸಮಸ್ಯೆಗಳಿದ್ದರೆ ಆಯಾ ರಾಜ್ಯಗಳು ಹೊಣೆಯಾಗಿದ್ದು, ಲಸಿಕೆ ವಿತರಣೆಯನ್ನು ಸರಿಯಾಗಿ ಯೋಜಿಸಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹರ್ಷವರ್ಧನ್, 'ಯಾವುದೇ ರಾಜ್ಯದಲ್ಲಿ ಲಸಿಕೆ ಪೂರೈಕೆ ಸಮಸ್ಯೆಯಿದ್ದರೆ ಆಯಾ ರಾಜ್ಯಗಳ ಲೋಪವಾಗಿದೆ. ರಾಜ್ಯಗಳುಲಸಿಕೆ ಕಾರ್ಯಕ್ರಮ ಉತ್ತಮವಾಗಿ ಯೋಜಿಸುವ ಅಗತ್ಯವಿದೆ. ರಾಜ್ಯಗಳಲ್ಲಿಯೋಜನೆ ಹಾಗೂ ವಿತರಣೆಯು ಆಯಾ ರಾಜ್ಯಗಳ ಜವಾಬ್ದಾರಿಯಾಗಿದೆ' ಎಂದು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಇಂತಹ ರಾಜಕೀಯ ಪ್ರೌವೃತ್ತಿಯಿಂದ ಹೊರಬರುವಂತೆ ನಾಯಕರಲ್ಲಿ ಕೋರುತ್ತೇನೆ ಎಂದಿದ್ದಾರೆ.

'ಈ ವಿಷಯಗಳ ಬಗ್ಗೆ ಗೊತ್ತಾಗಿಯೂ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದಾದರೆ ಅತ್ಯಂತ ದುರದೃಷ್ಟಕರ. ಅವರಿಗಿದರ ಬಗ್ಗೆ ಅರಿವಿಲ್ಲದಿದ್ದರೆ ಆಡಳಿದತ್ತ ಗಮನ ಹರಿಸಬೇಕು. ಭಯಭೀತಿ ಸೃಷ್ಟಿಸುವ ಬದಲು ಯೋಜನೆಯಲ್ಲಿ ಹೆಚ್ಚಿನ ಶ್ರಮ ವಹಿಸುವಂತೆ ನಾಯಕರನ್ನು ವಿನಂತಿ ಮಾಡುತ್ತೇನೆ' ಎಂದಿದ್ದಾರೆ.

ಕೇಂದ್ರ ಸರ್ಕಾರವು ಕೇಂದ್ರಿಕೃತವಾಗಿ ಲಸಿಕೆ ವಿತರಣೆಯನ್ನು ಪ್ರಾರಂಭಿಸಿದ ಬಳಿಕ ಲಸಿಕೆ ಪ್ರಕ್ರಿಯೆಯ ವೇಗ ಹೆಚ್ಚಿದೆ ಎಂದವರು ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರವು ಶೇಕಡಾ 75ರಷ್ಟು ಲಸಿಕೆಗಳನ್ನು ರಾಜ್ಯಗಳಿಗೆ ಉಚಿತವಾಗಿ ನೀಡಲು ಪ್ರಾರಂಭಿಸಿದ ಬಳಿಕ ಲಸಿಕೆ ಪ್ರಕ್ರಿಯೆಯವೇಗ ಹೆಚ್ಚಿದೆ. ಜೂನ್‌ನಲ್ಲಿ 11.50 ಕೋಟಿ ಡೋಸ್‌ಗಳನ್ನುವಿತರಿಸಲಾಗಿದೆ ಎಂದು ಹೇಳಿದ್ದಾರೆ.

ಲಸಿಕೆ ಕೊರತೆ ಬಗ್ಗೆ ಪಶ್ಚಿಮ ಬಂಗಾಳ, ದೆಹಲಿ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳಿಂದ ದೂರುಗಳು ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.