ADVERTISEMENT

ಮಹಾರಾಷ್ಟ್ರ: ವಿಷ ಸೇವಿಸಿ ಐಟಿಐ ವಿದ್ಯಾರ್ಥಿನಿ ಆತ್ಮಹತ್ಯೆ

ಪಿಟಿಐ
Published 12 ಮಾರ್ಚ್ 2023, 15:51 IST
Last Updated 12 ಮಾರ್ಚ್ 2023, 15:51 IST
.
.   

ನಾಗ್ಪುರ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇಲ್ಲಿನ ಐಟಿಐನ ವಿದ್ಯಾರ್ಥಿನಿಯೊಬ್ಬರು ನಾಗ್ಪುರ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ರಾಣಿ ಅಮರ್‌ದೀಪ್ ಧನ್‌ವಿಜಯ್ ಎಂಬುವರು ಐಟಿಐ ಕಾಲೇಜಿನ ಆವರಣದಲ್ಲೇ ಮಾರ್ಚ್ 6ರಂದು ವಿಷಸೇವಿಸಿ, ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರನ್ನು ವಿದ್ಯಾರ್ಥಿಗಳೇ ಆಸ್ಪತ್ರೆಗೆ ದಾಖಲಿಸಿದ್ದರು. ರಾಣಿ ಅಮರ್‌ದೀಪ್ ಅವರು ಶನಿವಾರ ರಾತ್ರಿ ಸಾವಿಗೀಡಾಗಿದ್ದು, ಅವರದ್ದು ಆಕಸ್ಮಿಕ ಸಾವು ಎಂದು ಇಲ್ಲಿನ ಧಾಂತೋಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆಗೆ ಹಿಂದಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.