ADVERTISEMENT

ಸುಶಾಂತ್ ರಜಪೂತ್ ಅಲ್ಲ,ರಜಪೂತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ: ಆರ್‌ಜೆಡಿ ಶಾಸಕ

ಪಿಟಿಐ
Published 17 ಸೆಪ್ಟೆಂಬರ್ 2020, 11:18 IST
Last Updated 17 ಸೆಪ್ಟೆಂಬರ್ 2020, 11:18 IST
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್    

ಪಟನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ರಜಪೂತ್ ಅಲ್ಲ. ಮಹಾರಾಣಾ ಪ್ರತಾಪ್‌ ಕುಲಕ್ಕೆ ಸೇರಿದವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಆರ್‌ಜೆಡಿ ಶಾಸಕ ಅರುಣ್ ಯಾದವ್ ಹೇಳಿದ್ದಾರೆ.

ಈ ರೀತಿ ಜಾತಿ ಉಲ್ಲೇಖಿಸಿ ಹೇಳಿಕೆ ನೀಡಿದ ಅರುಣ್ ಬಿಹಾರದ ಜನತೆ ಮತ್ತು ಸುಶಾಂತ್ ಅಭಿಮಾನಿಗಳಕ್ಷಮೆ ಕೇಳಬೇಕು ಎಂದು ಜೆಡಿಯು ಮತ್ತು ಬಿಜೆಪಿ ಒತ್ತಾಯಿಸಿದೆ.

ಬುಧವಾರಸಹರ್‌ಸಾದಲ್ಲಿ ನೂತನ ರಸ್ತೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅರುಣ್ ಯಾದವ್, 'ಸುಶಾಂತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ನನಗೆ ತುಂಬಾ ನೋವಾಗಿದೆ. ಅವನೊಬ್ಬ ರಜಪೂತ್. ಹೋರಾಟ ಮಾಡಬೇಕಿತ್ತು. ರಜಪೂತರು ಸಾಯುವುದಕ್ಕಿಂತ ಮುನ್ನ ಇನ್ನೊಬ್ಬರನ್ನು ಸಾಯಿಸುತ್ತಾರೆ. ಮಹಾರಾಣಾ ಪ್ರತಾಪ್ ರಜಪೂತರ ಪೂರ್ವಜ ಮಾತ್ರವಲ್ಲ ಯಾದವ್ ಜಾತಿಯ ಪೂರ್ವಜರಾಗಿದ್ದಾರೆ' ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.