ಲಕ್ಷ್ಮೀಪುರ ಕಿರಿ: 14 ವರ್ಷದ ಬಾಲಕಿಯ ಮೃತದೇಹಮನೆಯ ಮೇಲ್ಫಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.
‘ಮಾಹಿತಿ ಪಡೆದ ತಕ್ಷಣವೇ ಘಟನಾ ಸ್ಥಳಕ್ಕಾಗಮಿಸಿದಲಕ್ಷ್ಮೀಪುರ ಕಿರಿ ಪೊಲೀಸ್ ಅಧಿಕಾರಿ ಸತೇಂದ್ರ ಕುಮಾರ್ ಸಿಂಗ್, ಅರುಣ್ ಕುಮಾರ್ ಮತ್ತು ಮಿಥೌಲಿ ಪೊಲೀಸ್ ಅಧಿಕಾರಿ ಶಿಂಥಾನ್ಶು ಕುಮಾರ್ ಅವರು ತನಿಖೆಯನ್ನು ಆರಂಭಿಸಿದ್ದಾರೆ.ಈ ಸಂಬಂಧ ಬಾಲಕಿಯ ಮನೆಯವರು ಮತ್ತು ಕುಟುಂಬಸ್ಥರಲ್ಲಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಬಾಲಕಿಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರ ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದುಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.