ADVERTISEMENT

ಉತ್ತರ ಪ್ರದೇಶ: ತಂದೆಯ ಬೇಕರಿಯಲ್ಲೇ ದುರಂತ, ಓವನ್‌ನಲ್ಲಿ ಸಜೀವವಾಗಿ ಬೆಂದ ಬಾಲಕ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 4:30 IST
Last Updated 9 ಡಿಸೆಂಬರ್ 2018, 4:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಬಿಸ್ಕತ್‌ ಕಾರ್ಖಾನೆಯ ಓವನ್‌ನಲ್ಲಿ ಸಿಲುಕಿ ಬಾಲಕ ಸಜೀವವಾಗಿ ಬೆಂದಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಖೈರಪುರ್ ರಾಮನಾಥ ಗ್ರಾಮದ ದೀಪಕ್‌ ಜೈಸ್ವಾಲ್‌ (15) ಮೃತ ಬಾಲಕ.

ಬಾಲಕನ ತಂದೆಯ ಬೇಕರಿಯಲ್ಲಿಯೇ ಈ ದುರಂತ ಸಂಭವಿಸಿದೆ.ನೌಕರರೆಲ್ಲ ಮನೆಗೆ ಹೋದ ಬಳಿಕ ಬಾಲಕ ಓವನ್‌ ಬಂದ್‌ ಮಾಡಲು ಹೋಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಅದರೊಳಗೆ ಸಿಲುಕಿಕೊಂಡಿದ್ದಾನೆ. ಅಲ್ಲಿಂದ ಹೊರ ಬರುವುದು ಆತನಿಗೆ ಸಾಧ್ಯವಾಗಲಿಲ್ಲ. ಕೆಲ ಸಮಯದ ನಂತರ ಮಗನನ್ನು ಹುಡುಕಲು ಪ್ರಾರಂಭಿಸಿದ ಪೋಷಕರಿಗೆ ಬಾಲಕ ಓವನ್‌ನಲ್ಲಿ ಸಿಲುಕಿಕೊಂಡಿರುವುದು ಗೊತ್ತಾಗಿದೆ.

ಬಾಗಿಲು ಒಡೆದು ಬಾಲಕನನ್ನು ಹೊರತೆಗೆದಿದ್ದಾರೆ. ಗಂಭೀರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಅವನನ್ನು ಆಸ್ಪತ್ರೆಗೆ ಸಾಗಿಲಾಯಿತು. ಆದರೆ ವೈದ್ಯರು, ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದರು.

ADVERTISEMENT

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.