ADVERTISEMENT

ತೆಲುಗು ಲೇಖಕಿ ಅಬ್ಬೂರಿ ಛಾಯಾದೇವಿ ನಿಧನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 18:44 IST
Last Updated 28 ಜೂನ್ 2019, 18:44 IST
.
.   

ಹೈದರಾಬಾದ್‌ (ಪಿಟಿಐ): ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ತೆಲುಗಿನ ಪ್ರಸಿದ್ಧ ಲೇಖಕಿ ಅಬ್ಬೂರಿ ಛಾಯಾ
ದೇವಿ (86) ಶುಕ್ರವಾರ ನಿಧನರಾದರು.

ಅವರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಮ್ಮ ಬರಹಗಳಲ್ಲಿಮಹಿಳಾ ಸಂಬಂಧಿ ವಿಷಯಗಳಿಗೆ ಪ್ರಾಧಾನ್ಯತೆ ನೀಡಿದ್ದರು. ಅವರ ‘ಥಾನಾ ಮಾರ್ಗಂ’ ಪುಸ್ತಕಕ್ಕೆ 2005ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು.

ಇಂಗ್ಲಿಷ್‌ ಸಹಿತ ವಿವಿಧ ಭಾಷೆಗಳಿಗೆ ಅವರ ಬರಹಗಳು ಅನುವಾದಗೊಂಡಿವೆ.ಅವರು, ಪ್ರಸಿದ್ಧ ಲೇಖಕ ದಿವಂಗತ ಅಬ್ಬೂರಿ ವರದರಾಜೇಶ್ವರ ರಾವ್‌ ಪತ್ನಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.