ADVERTISEMENT

ಕೋಮು ಗಲಭೆಯಿಂದ 44 ವರ್ಷಗಳ ಹಿಂದೆ ಮುಚ್ಚಿದ್ದ ದೇಗುಲದ ಬಾಗಿಲು ತೆರೆದ ಜಿಲ್ಲಾಡಳಿತ

ಪಿಟಿಐ
Published 1 ಜನವರಿ 2025, 10:37 IST
Last Updated 1 ಜನವರಿ 2025, 10:37 IST
<div class="paragraphs"><p>ಚಿತ್ರ ಕೃಪೆ: ಎಕ್ಸ್‌</p></div>
   

ಚಿತ್ರ ಕೃಪೆ: ಎಕ್ಸ್‌

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನ ದೌಲತಾಬಾದ್‌ನಲ್ಲಿ ಕೋಮು ಗಲಭೆಯಿಂದಾಗಿ ಮುಚ್ಚಿದ್ದ ದೇಗುಲದ ಬಾಗಿಲನ್ನು 44 ವರ್ಷಗಳ ಬಳಿಕ ತೆರೆಯಲಾಗಿದೆ.

ಸ್ಥಳೀಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ದೇಗುಲದ ಬಾಗಿಲನ್ನು ತೆರೆದಿದ್ದಾರೆ.

ADVERTISEMENT

ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಅನೇಕ ದೇವಾಲಯಗಳನ್ನು ಪತ್ತೆ ಮಾಡಿ ಪೂಜೆ ಸಲ್ಲಿಸಿದ ಘಟನೆ ನಡೆದ ಬಳಿಕ ಈ ಬೆಳವಣಿಗೆ ಬೆಳಕಿಗೆ ಬಂದಿದೆ.

‘44 ವರ್ಷಗಳ ಬಳಿಕ ದೇಗಲದ ಬಾಗಿಲನ್ನು ಮತ್ತೆ ತೆರೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದೇಗುಲದ ಬಾಗಿಲನ್ನು ತೆರೆದ ಬಳಿಕ ಒಳಗೆ ದೇವರ ವಿಗ್ರಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು. ಸ್ಥಳೀಯ ಆಡಳಿತವು ದೇಗುಲವನ್ನು ಸ್ವಚ್ಛಗೊಳಿಸುವ, ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದೆ. ದೇವಾಲಯದ ಬಾಗಿಲು ತೆರೆಯುವ ಹಂತದಿಂದ ಈವರೆಗೂ ಇತರ ಸಮುದಾಯಗಳಿಂದ ಆಕ್ಷೇಪ ವ್ಯಕ್ತವಾಗಿಲ್ಲ, ಎಲ್ಲವೂ ಶಾಂತವಾಗಿಯೇ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.