ADVERTISEMENT

ಕೊರೊನಾ ಸೋಂಕಿನಿಂದ ತಿರುಪತಿ ಸಂಸದ ಸಾವು: ಲೋಕಸಭೆಯಲ್ಲಿ ಸಂತಾಪ

ಪಿಟಿಐ
Published 17 ಸೆಪ್ಟೆಂಬರ್ 2020, 15:42 IST
Last Updated 17 ಸೆಪ್ಟೆಂಬರ್ 2020, 15:42 IST
ಲೋಕಸಭೆಯಲ್ಲಿ ಸಂಸದರು ಮೌನಾಚರಣೆ ಮುಖಾಂತರ ರಾವ್‌ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು –ಪಿಟಿಐ ಚಿತ್ರ 
ಲೋಕಸಭೆಯಲ್ಲಿ ಸಂಸದರು ಮೌನಾಚರಣೆ ಮುಖಾಂತರ ರಾವ್‌ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು –ಪಿಟಿಐ ಚಿತ್ರ    

ತಿರುಪತಿ (ಆಂಧ್ರ ಪ್ರದೇಶ): ಕೋವಿಡ್‌–19ಗೆ ಚಿಕಿತ್ಸೆ ಪಡೆಯುತ್ತಿದ್ದ ತಿರುಪತಿ ಲೋಕಸಭಾ ಕ್ಷೇತ್ರದ ಸಂಸದ ಬಲ್ಲಿ ದುರ್ಗಾಪ್ರಸಾದ್‌ ರಾವ್ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಬುಧವಾರ ಕೊನೆಯುಸಿರೆಳೆದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ವೈಎಸ್‌ಆರ್‌ ಕಾಂಗ್ರೆಸ್‌ನ ಸಂಸದರಾಗಿದ್ದ ರಾವ್‌, ಕೋವಿಡ್‌–19 ದೃಢಪಟ್ಟ ಕಾರಣದಿಂದ ಚಿಕಿತ್ಸೆಗಾಗಿ ಮೂರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ‌ಮೂರು ಬಾರಿ ಶಾಸಕರಾಗಿ ಹಾಗೂ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ರಾವ್‌, ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಮಗಳನ್ನು ಅಗಲಿದ್ದಾರೆ.

ರಾವ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲೂ ಗುರುವಾರ, ಸಂಸದರು ಮೌನಾಚರಣೆ ಮುಖಾಂತರ ಸಂತಾಪ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.