ADVERTISEMENT

ನಿತೀಶ್‌ ಕುಮಾರ್‌ನಂತಹ ಅವಕಾಶವಾದಿಗಳಿಗೆ ಮತದಾರರೆ ಬುದ್ಧಿ ಕಲಿಸುತ್ತಾರೆ: ಟಿಎಂಸಿ

ಪಿಟಿಐ
Published 28 ಜನವರಿ 2024, 11:17 IST
Last Updated 28 ಜನವರಿ 2024, 11:17 IST
<div class="paragraphs"><p>ಟಿಎಂಸಿ</p></div>

ಟಿಎಂಸಿ

   

ಕೋಲ್ಕತ್ತ: ‘ಪದೇ ಪದೇ ಮೈತ್ರಿ ಬದಲಿಸುವ ನಿತೀಶ್‌ ಕುಮಾರ್‌ನಂತಹ ಅವಕಾಶವಾದಿ ರಾಜಕಾರಣಿಗಳಿಗೆ ಮತದಾರರೆ ತಕ್ಕ ಬುದ್ಧಿ ಕಲಿಸುತ್ತಾರೆ’ ಎಂದು ತೃಣ ಮೂಲ ಕಾಂಗ್ರೆಸ್‌(ಟಿಎಂಸಿ) ಸಂಸದ ಸುಗತ ರಾಯ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್‌, ‘ಪಕ್ಷ ಬದಲಿಸುವುದರಲ್ಲಿ ನಿತೀಶ್‌ ಕುಮಾರ್ ನಿಸ್ಸೀಮರು ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇಂಡಿಯಾ ಮೈತ್ರಿಕೂಟವನ್ನು ತೊರೆದು ಎನ್‌ಡಿಎ ಕೂಟವನ್ನು ಸೇರಿಕೊಳ್ಳುತ್ತಿರುವುದು ಮಾತ್ರ ದುರದೃಷ್ಟಕರ. ಇಂತಹ ಅವಕಾಶವಾದಿಗಳಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ’ ಎಂದು ಹೇಳಿದರು.

ADVERTISEMENT

ಜೆಡಿ(ಯು) ನಿರ್ಗಮನದಿಂದ ಇಂಡಿಯಾ ಮೈತ್ರಿಕೂಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೈತ್ರಿಕೂಟದಲ್ಲಿ ಗುರುತಿಸಿಕೊಂಡ ಪಕ್ಷವೊಂದು ಹೀಗೆ ಅಚಾನಕ್ಕಾಗಿ ಮೈತ್ರಿಯಿಂದ ಕಳಚಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರೆ ರಾಜಕಾರಣದಲ್ಲಿ ಪಕ್ಷ ಬಿಡುವುದು, ಸೇರುವುದು ನಡೆಯುತಲಿರುತ್ತದೆ. ಇದರಿಂದ ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ರಾಜಕೀಯ ದುರಾಸೆಗಾಗಿ ಮತದಾರರ ಆದೇಶವನ್ನು ತಿರಸ್ಕರಿಸಿದರೆ ಅದರ ಫಲವನ್ನು ಅವರೇ ಅನುಭವಿಸುತ್ತಾರೆ. ಇಂಡಿಯಾ ಮೈತ್ರಿಕೂಟ ರಚನೆಯಲ್ಲಿ ಮಮತಾ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸುತ್ತದೆ’ ಎಂದು ಟಿಎಂಸಿ ಸಚಿವ ಫಿರ್ಹಾದ್ ಹಕೀಮ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.