ADVERTISEMENT

ತಿರುಪತಿ ದೇವಸ್ಥಾನಂ | ಹಿಂದೂಗಳಲ್ಲದ ನಾಲ್ವರು ನೌಕರರ ಅಮಾನತು ಮಾಡಿದ ಟಿಟಿಡಿ

ಪಿಟಿಐ
Published 19 ಜುಲೈ 2025, 11:20 IST
Last Updated 19 ಜುಲೈ 2025, 11:20 IST
ಟಿಟಿಡಿ
ಟಿಟಿಡಿ   

ತಿರುಪತಿ: ಹಿಂದೂಗಳಲ್ಲದ ನಾಲ್ವರು ನೌಕರರನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ಡೆಪ್ಯೂಟಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ (ಗುಣಮಟ್ಟ ನಿಯಂತ್ರಕ) ಬಿ. ಎಲಿಜಾರ್‌, ಬಿಐಆರ್‌ಆರ್‌ಡಿ ಆಸ್ಪತ್ರೆಯ ಶುಶ್ರೂಷಕಿ ಎಸ್‌. ರೋಸಿ, ಗ್ರೇಡ್‌–1 ಫಾರ್ಮಾಸಿಸ್ಟ್‌ ಎಂ. ಪ್ರೇಮಾವತಿ ಹಾಗೂ ಎಸ್‌.ವಿ. ಆಯುರ್ವೇದ ಫಾರ್ಮಸಿಯ ಜಿ. ಅಸುಂತಾ ಅಮಾನತುಗೊಂಡವರು.

‘ಈ ನಾಲ್ವರು ಇತರೆ ಧರ್ಮ ಅನುಸರಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ’ ಎಂದು ಟಿಟಿಡಿ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಹಿಂದೂ ಧಾರ್ಮಿಕ ಸಂಸ್ಥೆಯೊಂದನ್ನು ಪ್ರತಿನಿಧಿಸುವಾಗ ಮತ್ತು ಕೆಲಸ ಮಾಡುವಾಗ ಈ ನೌಕರರು ತಮ್ಮ ಕರ್ತವ್ಯಗಳಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಹಾಗೂ ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ’ ಎನ್ನಲಾಗಿದೆ.

ಟಿಟಿಡಿಯ ಜಾಗೃತ ದಳ ಸಲ್ಲಿಸಿದ ವರದಿ ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ನಿಯಮಗಳ ಪ್ರಕಾರವೇ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.