ADVERTISEMENT

ಕೋವಿಡ್‌: ಕೇರಳದ ಪತ್ರಕರ್ತ ವಿಪಿನ್‌ ಚಂದ್‌ ನಿಧನ

ಪಿಟಿಐ
Published 9 ಮೇ 2021, 7:46 IST
Last Updated 9 ಮೇ 2021, 7:46 IST
ವಿಪಿನ್‌ ಚಂದ್‌                 –ಟ್ವಿಟರ್‌ ಚಿತ್ರ
ವಿಪಿನ್‌ ಚಂದ್‌                 –ಟ್ವಿಟರ್‌ ಚಿತ್ರ   

ಕೊಚ್ಚಿ: ‘ಮನೋರಮಾ ನ್ಯೂಸ್‌’ನ ಮುಖ್ಯವರದಿಗಾರರ ವಿಪಿನ್‌ ಚಂದ್‌ (42) ಅವರು ಕೋವಿಡ್‌ ಸಂಬಂಧಿತ ಸಮಸ್ಯೆಯಿಂದ ಭಾನುವಾರ ನಿಧನರಾದರು.

‘ವಿಪಿನ್‌ ಚಂದ್‌ ಅವರು ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲೂ ಕೆಲಸದಲ್ಲಿ ಸಕ್ರಿಯರಾಗಿದ್ದರು. ಎರಡು ವಾರಗಳ ಹಿಂದೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರನ್ನು ಮನೆಯಲ್ಲೇ ‍ಪ್ರತ್ಯೇಕ ವಾಸದಲ್ಲಿ ಇರಿಸಲಾಗಿತ್ತು. ಆದರೆ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು’ ಎಂದು ಕುಟುಂಬದವರು ತಿಳಿಸಿದರು.

‘ವಿಪಿನ್‌ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಕೊಚ್ಚಿಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಸುಕಿನ 2 ಗಂಟೆಗೆ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಎರ್ನಾಕುಲಂದ ಅಲಂಗಡ್ ನಿವಾಸಿ ವಿಪಿನ್‌ ಚಂದ್‌ ಅವರು 2005ರಲ್ಲಿ ಪತ್ರಿಕೋದ್ಯಮ ವೃತ್ತಿಯನ್ನು ಪ್ರಾರಂಭಿಸಿದ್ದರು. 2012ರಲ್ಲಿ ‘ಮಾತೃಭೂಮಿ ನ್ಯೂಸ್‌’ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.