ADVERTISEMENT

ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ ಆರೋಪಿಗಳಿಗೆ ಪೊಲೀಸ್ ಗುಂಡೇಟು; ಇಬ್ಬರ ಸಾವು

ಪಿಟಿಐ
Published 3 ಜುಲೈ 2022, 14:00 IST
Last Updated 3 ಜುಲೈ 2022, 14:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಲ್ಚಾರ್: ಅಸ್ಸಾಂನ ಕಾಚಾರ್ ಜಿಲ್ಲೆಯಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವಿವಿಧ ಪ್ರಕರಣಗಳ ಇಬ್ಬರು ಆರೋಪಿಗಳು, ಪೊಲೀಸ್ ಗುಂಡೇಟಿಗೆ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಇವರಿಬ್ಬರಲ್ಲಿ ಒಬ್ಬ ಜಿಲ್ಲೆಯ 'ಮೋಸ್ಟ್ ವಾಂಟೆಡ್' ಅಪರಾಧಿಯ ಪಟ್ಟಿಯಲ್ಲಿದ್ದು, ಅಪಹರಣ, ಡಕಾಯಿತಿ, ವಾಹನ ಕಳವು ಪ್ರಕಣರಣಗಳಲ್ಲಿ ಭಾಗಿಯಾಗಿದ್ದಾನೆ.

ಭೂ ವಿವಾದ ಪ್ರಕರಣದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಿತ್ತು. ಜೊರಾಬತ್ ಪ್ರದೇಶದಲ್ಲಿ ವಾಹನವೊಂದರಲ್ಲಿ ಹಲವು ಪ್ರಕರಣಗಳ ಅಪರಾಧಿ ಸೇರಿದಂತೆ ಇತರ ಇಬ್ಬರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದರು.

ಶನಿವಾರ ರಾತ್ರಿ ಪೊಲೀಸರು ಈ ಮೂವರನ್ನು ವಾಹನದಲ್ಲಿ ಸಿಲ್ಚಾರ್‌ಗೆ ಕರೆತರುತ್ತಿದ್ದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಬಳಿಕ ಪೊಲೀಸ್ ಗುಂಡಿನ ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.