ADVERTISEMENT

ಉದ್ದವ್‌ ಠಾಕ್ರೆ ಜತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ 6 ಶಾಸಕರು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 14:17 IST
Last Updated 28 ನವೆಂಬರ್ 2019, 14:17 IST
   

ಮುಂಬೈ: ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಜೊತೆ 6 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಶಿವಸೇನಾ, ಕಾಂಗ್ರೆಸ್‌ ಹಾಗೂ ಎನ್‌ಸಿಪಿಯ ತಲಾ ಇಬ್ಬರು ಶಾಸಕರು ಸಚಿವರಾಗಿದ್ದಾರೆ. ಶಿವಸೇನಾದಸುಭಾಶ್‌ ರಾಜಾರಾಮ್‌ ದೇಸಾಯಿ ಹಾಗೂಏಕನಾಥ್ ಸಾಂಬಾಜಿ ಶಿಂಧೆ ಸಚಿವರಾದರು.

ಕಾಂಗ್ರೆಸ್‌ ಪಕ್ಷದ ವತಿಯಿಂದಬಾಳಾಸಾಹೇಬ್‌ ತೋರಟ್‌, ನಿತಿನ್‌ ರಾವುತ್‌ ಮಂತ್ರಿಗಳಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು. ಇನ್ನು ಎನ್‌ಸಿಪಿಯಿಂದಜಯಂತ್‌ ಪಾಟೀಲ್‌, ಛಗನ್‌ ಭುಜಬಲ್‌ ಮಂತ್ರಿಗಳಾದರು.

ಶಿವಸೇನಾ ಹಾಗೂ ಎನ್‌ಸಿಪಿ ತಲಾ 15 ಸಚಿವ ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್‌ ಸ್ಫೀಕರ್ ಹುದ್ದೆ ಸೇರಿದಂತೆ 13 ಸಚಿವ ಸ್ಥಾನಗಳನ್ನು ಪಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.