ADVERTISEMENT

ಉದ್ಯೋಗ ಸಿಗದಿದ್ದಕ್ಕೆ ಮನನೊಂದು 29 ವರ್ಷದ ಯುವಕ ಆತ್ಮಹತ್ಯೆ

ಪಿಟಿಐ
Published 11 ನವೆಂಬರ್ 2021, 5:11 IST
Last Updated 11 ನವೆಂಬರ್ 2021, 5:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗ್ಪುರ್: ಉದ್ಯೋಗ ಸಿಗದಿದ್ದಕ್ಕೆ 29 ವರ್ಷದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್‌ದ ಕಾಲಮ್ನಾ ಎಂಬ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಭೂಷಣ್ ಗಾವಂಡೆ ಎಂದು ಗುರುತಿಸಲಾಗಿದೆ.

ಹಳ್ಳಿಯಿಂದ ಉದ್ಯೋಗ ಹುಡುಕಿಕೊಂಡು ನಾಗ್ಪುರ್‌ಗೆ ಬಂದಿದ್ದ ಭೂಷಣ್, ಚಂದಾಪುರದಲ್ಲಿ ತಂಗಿದ್ದ. ಉದ್ಯೋಗ ಸಿಗದಿದ್ದಕ್ಕೆ ಮನನೊಂದು ಕೋಣೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.