ADVERTISEMENT

ಉತ್ತರ ಪ್ರದೇಶ: ಗಂಗಾ–ಯಮುನಾ ನದಿಗಳಲ್ಲಿ ಮೂರ್ತಿ ವಿಸರ್ಜನೆ ವೇಳೆ 6 ಮಂದಿ ಸಾವು?

ಪಿಟಿಐ
Published 16 ಅಕ್ಟೋಬರ್ 2021, 13:17 IST
Last Updated 16 ಅಕ್ಟೋಬರ್ 2021, 13:17 IST
ಗಂಗಾ ನದಿಯಲ್ಲು ದುರ್ಗಾ ಮೂರ್ತಿ ವಿಸರ್ಜನೆ: ಪಿಟಿಐ ಚಿತ್ರ
ಗಂಗಾ ನದಿಯಲ್ಲು ದುರ್ಗಾ ಮೂರ್ತಿ ವಿಸರ್ಜನೆ: ಪಿಟಿಐ ಚಿತ್ರ   

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ಮತ್ತು ಬದೌನ್ ಜಿಲ್ಲೆಗಳಲ್ಲಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಗಂಗಾ ಮತ್ತು ಯಮುನಾ ನದಿಗಳಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿದ್ದು, ಯಮುನಾ ನದಿಯಿಂದ 12 ವರ್ಷದ ಬಾಲಕನ ಶವವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬದೌನ್ ಜಿಲ್ಲೆಯಲ್ಲಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ನಾಲ್ಕು ಜನರು ಗಂಗಾ ನದಿಯಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ, ನಾಲ್ವರು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

ನಾಪತ್ತೆಯಾದವರ ಪತ್ತೆಗಾಗಿ ಶೋಧ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಒಪಿ ಸಿಂಗ್ ಶನಿವಾರ ತಿಳಿಸಿದ್ದಾರೆ.

ಫಿರೋಜಾಬಾದ್‌ನ ಯಮುನಾ ನದಿಯಲ್ಲಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ಮೂವರು ನಾಪತ್ತೆಯಾಗಿದ್ದರು. ಅದರಲ್ಲಿ ಗೋಪಾಲ್ ರಾಥೋರ್ (12) ಮೃತದೇಹವನ್ನು ಶನಿವಾರ ಹುಡುಕಿ ತೆಗೆಯಲಾಗಿದ್ದು, ನೀರಜ್ ಬಘೇಲ್ (11) ಮತ್ತು ವಿಶಾಲ್ ಮೊಹಲ್ಲೆ (16)ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ರಾಜೇಶ್ ಕುಮಾರ್ ವರ್ಮಾ ಶನಿವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.