ADVERTISEMENT

ಅಕಾಲಿದಳದ ಹಿರಿಯ ನಾಯಕ ರಂಜಿತ್ ಸಿಂಗ್ ನಿಧನ

ಪಿಟಿಐ
Published 13 ಡಿಸೆಂಬರ್ 2022, 10:29 IST
Last Updated 13 ಡಿಸೆಂಬರ್ 2022, 10:29 IST
 ರಂಜಿತ್ ಸಿಂಗ್
ರಂಜಿತ್ ಸಿಂಗ್   

ಚಂಡೀಗಡ: ಪಂಜಾಬ್ ರಾಜಕೀಯ ಮುಖಂಡರಾಗಿದ್ದ ಹಾಗೂ ಶಿರೋಮಣಿ ಅಕಾಲಿದಳದ ನಾಯಕ, ಮಾಜಿ ಸಚಿವ ರಂಜಿತ್ ಸಿಂಗ್ ಬ್ರಹ್ಮಾಪುರ್ ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಂಡೀಗಡದ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ರಂಜಿತ್ ಸಿಂಗ್ ಅವರ ಹುಟ್ಟೂರು ತರಣ್ ತರಣ್ ಜಿಲ್ಲೆಯ ಬ್ರಹ್ಮಾಪುರ್‌ದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅಕಾಲಿದಳದ ನಾಯಕ ದಲ್ಜಿತ್ ಸಿಂಗ್ ಚೀಮಾ ಹೇಳಿದ್ದಾರೆ.

ADVERTISEMENT

ರಂಜಿತ್ ಸಿಂಗ್ ಬ್ರಹ್ಮಾಪುರ್ ಅವರು ನಾಲ್ಕು ಬಾರಿ ಶಾಸಕರಾಗಿ ಸಚಿವರಾಗಿದ್ದರು. ಖಡೂರ್ ಸಾಹೀಬ್ ಲೋಕಸಭಾ ಕ್ಷೇತ್ರದಿಂದ ಒಮ್ಮೆ ಸಂಸದರಾಗಿದ್ದರು. ಇತ್ತೀಚೆಗೆ ಅವರನ್ನು ಅಕಾಲಿದಳದ ಮಹಾಪೋಷಕ ಹುದ್ದೆಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.