ಕಾನ್ಪುರದಲ್ಲಿ ಪೊಲೀಸ್ ಎನ್ಕೌಂಟರ್ನಿಂದ ಹತನಾದ ರೌಡಿ ವಿಕಾಸ್ ದುಬೆ ಜೀವಕ್ಕೆ ಪೊಲೀಸರಿಂದ ಅಪಾಯವಿದೆ ಎಂಬ ಅರ್ಜಿಯೊಂದು ದುಬೆ ಸಾವಿಗೆ ಕೆಲ ಗಂಟೆಗಳ ಮೊದಲು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿತ್ತು.
ಈ ವಿಚಾರವನ್ನು ನ್ಯಾಯಾಲಯ ಕಲಾಪಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಜಾಲತಾಣ 'ಬಾರ್ ಅಂಡ್ ಬೆಂಚ್' ಬಹಿರಂಗಪಡಿಸಿದೆ.
ಇದನ್ನೂ ಓದಿ:ಕಾನ್ಪುರ ಎನ್ಕೌಂಟರ್: ವಿಕಾಸ್ ದುಬೆ ಸಾವು
'ಉತ್ತರ ಪ್ರದೇಶ ಪೊಲೀಸರು ವಿಕಾಸ್ ದುಬೆಯನ್ನು ಕೊಲ್ಲಬಹುದು. ದುಬೆಯ ಎಲ್ಲ ಸಹಚರರನ್ನು ಎನ್ಕೌಂಟರ್ಗಳಲ್ಲಿ ಕೊಲ್ಲಲಾಗಿದೆ' ಎಂದು ಅರ್ಜಿ ಉಲ್ಲೇಖಿಸಿತ್ತು.
'ಅರ್ಜಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳದಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ದುಬೆ ಸಹಚರರ ಎನ್ಕೌಂಟರ್ ಬಗ್ಗೆ ಸಿಬಿಐ ನಿಗಾವಣೆಯಲ್ಲಿ ತನಿಖೆ ನಡೆಯಬೇಕಿದೆ' ಎಂದು ಅರ್ಜಿ ಮನವಿ ಮಾಡಿತ್ತು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.