ADVERTISEMENT

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಮಧ್ಯಪ್ರದೇಶ ಸಿಎಂ ಅಳಿಯನಿಗೆ ತಪ್ಪದ ಸಂಕಷ್ಟ

ಜಾಮೀನುರಹಿತ ವಾರಂಟ್‌ ರದ್ದತಿಗೆ ರಾತುಲ್‌ ಪುರಿ ಮಾಡಿದ್ದ ಮನವಿ ತಿರಸ್ಕೃತ

ಏಜೆನ್ಸೀಸ್
Published 21 ಆಗಸ್ಟ್ 2019, 13:57 IST
Last Updated 21 ಆಗಸ್ಟ್ 2019, 13:57 IST
ರಾತುಲ್‌ ಪುರಿ
ರಾತುಲ್‌ ಪುರಿ   

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಸೋದರಳಿಯ ರಾತುಲ್‌ ಪುರಿ ವಿರುದ್ಧ ಹೊರಡಿಸಿರುವ ಜಾಮೀನುರಹಿತ ವಾರಂಟ್‌ ರದ್ದು ಪಡಿಸಲು ದೆಹಲಿಯ ನ್ಯಾಯಾಲಯವು ಬುಧವಾರ ನಿರಾಕರಿಸಿದೆ

ಅಕ್ರಮವಾಗಿ ಹಣ ವರ್ಗಾವಣೆ ನಡೆಸಿರುವ ಆರೋಪ ರಾತುಲ್‌ ಮೇಲಿದೆ. ವಿಶೇಷ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಅವರು ರಾತುಲ್‌ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಬ್ಯಾಂಕ್‌ಗೆ ವಂಚನೆ ನಡೆಸಿರುವ ಪ್ರಕರಣದಲ್ಲಿ ರಾತುಲ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರವೇ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.