ADVERTISEMENT

ಪ.ಬಂಗಾಳದಲ್ಲಿ ಹಿಂಸಾಚಾರದ ರಾಜಕೀಯಕ್ಕೆ ಮೇ 2ರಂದು ಕೊನೆ: ವಿಜಯವರ್ಗೀಯ

ಏಜೆನ್ಸೀಸ್
Published 29 ಮಾರ್ಚ್ 2021, 8:53 IST
Last Updated 29 ಮಾರ್ಚ್ 2021, 8:53 IST
ಕೈಲಾಶ್ ವಿಜಯವರ್ಗೀಯ
ಕೈಲಾಶ್ ವಿಜಯವರ್ಗೀಯ   

ಸಿಲ್‌ಗುರಿ: ಹಿಂಸಾಚಾರವು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಕೊನೆಯ ಅಸ್ತ್ರವಾಗಿದ್ದು, ಮೇ 2ರಂದು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ರಾಜಕೀಯ ಕೊನೆಗೊಳ್ಳಲಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, 'ಹಿಂಸಾಚಾರವು ಟಿಎಂಸಿಯ ಕೊನೆಯ ಅಸ್ತ್ರವಾಗಿದೆ. ಬಂಗಾಳ ಇತಿಹಾಸದಲ್ಲೇ ಇದು ಕೊನೆಯ ಹಿಂಸಾಚಾರವಾಗಲಿದ್ದು, ಮೇ 2ರ ನಂತರ ರಾಜ್ಯದ ಹಿಂಸಾಚಾರ ರಾಜಕೀಯವು ಕೊನೆಗೊಳ್ಳಲಿದೆ' ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 30 ಸ್ಥಾನಗಳ ಪೈಕಿ 26ರಲ್ಲಿ ಗೆಲುವು ದಾಖಲಿಸಲಿದೆ ಎಂಬ ಬಿಜೆಪಿ ನಾಯಕ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯವರ್ಗೀಯ, ಪಕ್ಷವು ಎಲ್ಲ ಸ್ಥಾನಗಳನ್ನು ಗೆದ್ದರೆ ಆಶ್ಚರ್ಯಪಡಬೇಕಿಲ್ಲ ಎಂದು ಹೇಳಿದ್ದಾರೆ.

'ನಾವು ಎಲ್ಲ 30 ಸ್ಥಾನಗಳನ್ನು ಗೆದ್ದರೆ ಅಚ್ಚರಿಯಿಲ್ಲ. ಟಿಎಂಸಿ ಬೂತ್‌ಗಳನ್ನು ವಶಕ್ಕೆ ಪಡೆದು ನಕಲಿ ಮತದಾನ ಮಾಡುವುದನ್ನು ತಡೆಯಲಾಗಿದೆ. ಮತದಾರರು ತಮ್ಮ ಇಚ್ಚೆಯಂತೆ ಮತದಾನ ಚಲಾಯಿಸಿದ್ದಾರೆ. ಜನ ಬೆಂಬಲ ಬಿಜೆಪಿಗೆ ಸಿಗಲಿದ್ದು, ಗೂಂಡಾಗಳಿಗೆ ಯಶಸ್ಸು ಸಿಗುವುದಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.