ನವದೆಹಲಿ: ಬಿಜೆಪಿ ಕಾರ್ಯಕರ್ತನೊಬ್ಬಜಾರ್ಖಂಡ್ ಸಂಸದ ನಿಶಿಕಾಂತ್ ದುಬೇ ಅವರಪಾದ ತೊಳೆದು, ಆ ನೀರನ್ನು ಸೇವಿಸಿದ್ದಾನೆ. ಇದುತಮ್ಮ ಅಭಿಮಾನಿಯ ಪ್ರೀತಿ ಎಂದು ದುಬೇ ಸಮರ್ಥನೆ ಮಾಡಿಕೊಂಡಿದ್ದಾರೆ. ದುಬೇ ಅವರು ಮೋದಿಯ ಪಾದ ತೊಳೆದು ಆ ಕೊಳಕುನೀರನ್ನು ಕುಡಿಯುತ್ತಾರಾ? ಹಾಗೆ ಕುಡಿಯದಿದ್ದರೆ, ದುಬೇ ಅವರು ಮೋದಿಯವರನ್ನು ಪ್ರೀತಿಸುತ್ತಿಲ್ಲ ಎಂದು ಅರ್ಥ' - ಹಿರಿಯ ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ ಈ ರೀತಿ ಟ್ವೀಟ್ ಮಾಡಿದ್ದಾರೆ.
ಭಾನುವಾರ ಜಾರ್ಖಂಡ್ನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬಬಿಜೆಪಿ ಸಂಸದ ನಿಶಿಕಾಂತ್ ದುಬೇ ಅವರ ಪಾದ ತೊಳೆದು, ಈ ನೀರನ್ನು ಸೇವಿಸಿರುವ ಘಟನೆಗೆ ಸಿಬಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಪವನ್ ಶಾ ಎಂಬಾತ ದುಬೇ ಅವರ ಪಾದ ತೊಳೆದು ಆ ನೀರನ್ನು ಸೇವಿಸುತ್ತಿರುವ ವಿಡಿಯೊ ವೈರಲ್ ಆಗುವುದರ ಜತೆಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪವನ್ ಶಾ, ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ನಾನು ಪಾದ ತೊಳೆದು, ಆ ನೀರನ್ನು ಕುಡಿಯುವ ಮೂಲಕ ಯಾವ ತಪ್ಪು ಮಾಡಿದೆ?.ಅವರು ನನಗೆ ಅಣ್ಣನಂತೆ, ನನ್ನ ಮೇಲೆ ಟೀಕಾಪ್ರಹಾರ ಮಾಡುವ ಜನರ ವಿರುದ್ಧ ನಾನು ದೂರು ನೀಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.