ADVERTISEMENT

ಲಕ್ಷದ್ವೀಪ ಸಂಸದರ ಸದಸ್ಯತ್ವದ ಸಿಂಧುತ್ವ: ಕಾಯ್ದೆಯ ಪ್ರಕಾರ ಕ್ರಮ

ಪಿಟಿಐ
Published 27 ಜನವರಿ 2023, 14:23 IST
Last Updated 27 ಜನವರಿ 2023, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಕ್ಷ್ಮದ್ವೀಪ ಕ್ಷೇತ್ರದ ಸಂಸದರ ಅನರ್ಹತೆ ವಿಷಯದಲ್ಲಿ ಕಾನೂನು ಪ್ರಕಾರವೇ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಆಯೋಗವು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೊಲೆಯತ್ನ ಪ್ರಕರಣದಲ್ಲಿ ಸಂಸದ ಮೊಹಮ್ಮದ್ ಫೈಝಲ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆ ಆದೇಶವನ್ನು ಕೇರಳ ಹೈಕೋರ್ಟ್ ಅಮಾನತುಪಡಿಸಿದೆ ಎಂಬುದನ್ನು ಗಮನಿಸಲಾಗುವುದು ಎಂದು ಆಯೋಗವು ತಿಳಿಸಿತು.

ಲಕ್ಷ್ಮದ್ವೀಪ ಕ್ಷೇತ್ರಕ್ಕೆ ಉಪಚುನಾವಣೆ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಫೈಜಲ್‌ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಆಧಾರದಲ್ಲಿ ಆಯೋಗವು ಉಪ ಚುನಾವಣೆಯನ್ನು ಘೋಷಿಸಿತ್ತು.

ADVERTISEMENT

ಫೈಝಲ್‌ ಪರ ವಕೀಲ ಕಪಿಲ್‌ ಸಿಬಲ್ ಅವರು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಉಪಚುನಾವಣೆ ನಡೆಸಲಾಗದು ಎಂದು ‍ಪ್ರತಿಪಾದಿಸಿದರು. ಆಗ ಆಯೋಗ ಕಾಯ್ದೆಯಂತೆ ಕ್ರಮವಹಿಸಲಿದೆ ಎಂದು ಆಯೋಗದ ಪರ ವಕೀಲ ಮಣಿಂದರ್‌ ಸಿಂಗ್‌ ಹೇಳಿದರು. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಬಿ.ವಿ.ನಾಗರತ್ನ ಅವರಿದ್ದ ಪೀಠ ಇದನ್ನು ಪರಿಗಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.