ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಅಯೋಧ್ಯೆಯಲ್ಲಿ ಏಳು ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಅನಾವರಣಗೊಳಿಸಿದರು.
‘ಕೋದಂಡ ರಾಮ’ನ ಅವತಾರದ ಈ ಪ್ರತಿಮೆಯ ಕೆತ್ತನೆಗೆ ಬೀಟೆಮರ (ರೋಸ್ವುಡ್) ಬಳಸಲಾಗಿದೆ. ಕರ್ನಾಟಕ ರಾಜ್ಯ ಕಲೆ ಮತ್ತು ಕರಕುಶಲ ಎಂಪೋರಿಯಂನಿಂದ ₹ 35 ಲಕ್ಷಕ್ಕೆ ಇದನ್ನು ಖರೀದಿಸಲಾಗಿದೆ.
ದೇಶದ ಸಾಂಸ್ಕೃತಿಕ ಪರಂಪರೆಯ ಸಂಶೋಧನೆ ಕಾರ್ಯದಲ್ಲಿ ತೊಡಗಿರುವ ‘ಆಯೋಧ್ಯಾ ಶೋಧ ಸಂಸ್ಥಾನ’ದ ಸಂಗ್ರಹಾಲಯದಲ್ಲಿ ಪ್ರತಿಮೆ ಇಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.